ನೆಲಕ್ಕುರಿಳಿದ ಆಲದ ಮರ: ಆರು ಕಾರು ಜಖಂ

Update: 2020-02-09 15:39 GMT

ಬೆಂಗಳೂರು, ಫೆ.9: ಇಲ್ಲಿನ ಚಾಮರಾಜಪೇಟೆಯ ನಾಲ್ಕನೇ ಮುಖ್ಯರಸ್ತೆಯಲ್ಲಿ ಬೃಹತ್ ಆಲದ ಮರವೊಂದು ನೆಲಕ್ಕುರಿಳಿದ ಪರಿಣಾಮ ಆರಕ್ಕೂ ಹೆಚ್ಚು ಕಾರುಗಳು ಸಂಪೂರ್ಣ ಜಖಂ ಅಗಿವೆ.

ರವಿವಾರ ಬೆಳಗ್ಗೆ 10ಕ್ಕೆ ಆಲದ ಮರ ಟೊಳ್ಳಾಗಿ, ಗುಣಮಟ್ಟ ಕಳೆದುಕೊಂಡಿದ್ದರಿಂದ ಮರ ಧರೆಗೆ ಉರುಳಿದೆ. ಈ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೃಹತ್ ಆಲದ ಮರದಡಿ ಸಿಲುಕಿರುವ ಕಾರುಗಳ ಗಾಜುಗಳು ಪುಡಿ ಪುಡಿಯಾಗಿವೆ. ಘಟನಾ ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್ ಕೋಕಿಲಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. 10ಕ್ಕೂ ಹೆಚ್ಚು ಅಗ್ನಿಶಾಮಕದಳ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News