ಫೆ.14ರಂದು ಸಿಎಂ ಯಡಿಯೂರಪ್ಪ ದಾವಣಗೆರೆಗೆ

Update: 2020-02-12 13:06 GMT

ದಾವಣಗೆರೆ, ಫೆ.12: ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಫೆ.14 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 

ಮುಖ್ಯಮಂತ್ರಿ ಅಂದು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಟು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ (ಶ್ರೀ ಸಂತ ಸೇವಾಲಾಲ್ ಮಂದಿರ ಹತ್ತಿರ) ಹೆಲಿಪ್ಯಾಡ್‍ಗೆ ಮಧ್ಯಾಹ್ನ 3.45 ಗಂಟೆಗೆ ಬಂದು ತಲುಪುವರು. ನಂತರ ಅವರು ಸೂರಗೊಂಡನಕೊಪ್ಪದ ಶ್ರೀ ಸಂತ ಸೇವಾಲಾಲ್‍ರವರ 281ನೇ ಜಯಂತೋತ್ಸವದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ಮುಗಿದ ನಂತರ ಮುಖ್ಯಮಂತ್ರಿ ಸಂಜೆ 4.45 ಗಂಟೆಗೆ ಸೂರಗೊಂಡನಕೊಪ್ಪ (ಶ್ರೀ ಸಂತ ಸೇವಾಲಾಲ್ ಮಂದಿರ ಹತ್ತಿರ) ಹೆಲಿಪ್ಯಾಡ್‍ನಿಂದ ಹೊರಟು ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣವನ್ನು ಸಂಜೆ 6.00 ಗಂಟೆಗೆ ತಲುಪಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News