​ಕರ್ನಾಟಕದ ಗೃಹ ಸಚಿವರು ನನಗೆ ಕರೆ ಮಾಡಿಲ್ಲ: ರಾಮಚಂದ್ರ ಗುಹಾ

Update: 2020-02-20 12:45 GMT

ಬೆಂಗಳೂರು: 2019 ರ ಡಿ. 19 ರಂದು ಬೆಂಗಳೂರು ಪೊಲೀಸರು ತನ್ನನ್ನು ಎಳೆದೊಯ್ದು ತಮ್ಮ ವಶಕ್ಕೆ ಪಡೆದಿದ್ದಕ್ಕೆ ದೂರವಾಣಿ ಮೂಲಕ ಕ್ಷಮೆಯಾಚಿಸಿದ್ದಾರೆ ಎಂದು ಸದನದಲ್ಲಿ ಕರ್ನಾಟಕದ ಗೃಹ ಸಚಿವರು ಹೇಳಿಕೊಂಡಿದ್ದಾರೆ. ಇದು ಸುಳ್ಳು. ನನಗೆ ಅಂತಹ ಯಾವುದೇ ಕರೆ ಅಥವಾ ಕ್ಷಮೆಯಾಚನೆ ಬಂದಿಲ್ಲ ಎಂದು ರಾಮಚಂದ್ರ ಗುಹಾ ಅವರು ಟ್ವೀಟ್ ಮಾಡಿದ್ದಾರೆ.

ಅವರು ಒಂದು ವೇಳೆ ಕ್ಷಮೆಯಾಚಿಸಿದ್ದರೂ, ನಾನು ಅದನ್ನು ತಿರಸ್ಕರಿಸುತ್ತಿದ್ದೆ. ಸೆಕ್ಷನ್ 144 ಅನ್ನು ಹೇರುವುದು ಕಾನೂನುಬಾಹಿರವಾಗಿದೆ ಮತ್ತು ಆ ದಿನ ರಾಜ್ಯದ ಅನಿಯಂತ್ರಿತ ಕ್ರಮವನ್ನು ಧಿಕ್ಕರಿಸಿದ ಸಾವಿರಾರು ಶಾಂತಿಯುತ ಪ್ರತಿಭಟನಾಕಾರರಲ್ಲಿ ಒಬ್ಬನೆಂದು ನನಗೆ ಹೆಮ್ಮೆ ಇದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಡಿ.19ರಂದು ಇತಿಹಾಸಕಾರ ರಾಮಚಂದ್ರ ಗುಹಾ ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಗುಹಾ ಸಹಿತ ಇತರ ಪ್ರತಿಭಟನಾಕಾರನ್ನು ಎಳೆದೊಯ್ದು ತಮ್ಮ ವಶಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News