ಅಮೂಲ್ಯಗೆ ಗುಂಡಿಕ್ಕಿದರೆ 10 ಲಕ್ಷ ರೂ.: ಶ್ರೀರಾಮಸೇನೆ ಸಂಚಾಲಕ ವಿವಾದಿತ ಹೇಳಿಕೆ

Update: 2020-02-22 11:51 GMT

ಬಳ್ಳಾರಿ, ಫೆ.22: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಡಿ ಬಂಧನವಾಗಿರುವ ಅಮೂಲ್ಯಗೆ ಪಿಸ್ತೂಲಿನಿಂದ ಗುಂಡಿಕ್ಕಿದರೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಬಿಜೆಪಿ ಮುಖಂಡ, ಶ್ರೀರಾಮಸೇನೆ ಸಂಚಾಲಕ ಸಂಜೀವ್ ಮರಡಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿ ಅಮೂಲ್ಯಳನ್ನು ಎನ್‌ಕೌಂಟರ್ ಮಾಡಿದವರಿಗೆ 10 ಲಕ್ಷ ರೂ. ನೀಡಲಾಗುವುದು. ಅಲ್ಲದೆ, ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯ ಪರ ಯಾರೊಬ್ಬರೂ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು. ಜಾಮೀನು ಸಿಗಬಾರದು ಎಂದು ಹೇಳಿದ್ದಾರೆ.

ಒಂದು ವೇಳೆ ನ್ಯಾಯಾಲಯ ಅಮೂಲ್ಯಗೆ ಜಾಮೀನು ಕೊಟ್ಟರೆ ನಾವೇ ಎನ್‌ಕೌಂಟರ್ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಆಕೆಯನ್ನು ಯಾರಾದರೂ ಹತ್ಯೆ ಮಾಡಿದರೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News