ಮೇಕೇರಿ: ಪ್ರಪಾತಕ್ಕೆ ಉರುಳಿ ಬಿದ್ದ ಹಾಲಿನ ವಾಹನ

Update: 2020-02-22 13:02 GMT

ಮಡಿಕೇರಿ, ಫೆ.22: ಕೂಡಿಗೆ ಹಾಲಿನ ಡೈರಿಯಿಂದ ಮಡಿಕೇರಿ ಮಾರ್ಗವಾಗಿ ಮೂರ್ನಾಡು ಮೂಲಕ ನಾಪೋಕ್ಲು ಕಡೆಗೆ ಹೊರಟಿದ್ದ ಹಾಲಿನ ಕ್ಯಾಂಟರ್, ಮೇಕೇರಿ ಮಸೀದಿ ಬಳಿಯ ತಿರುವಿನ ರಸ್ತೆಯಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. 

ವಾಹನ ಚಲಾಯಿಸುತ್ತಿದ್ದ 30 ವರ್ಷದ ಸ್ವಾಮಿ ಸೇರಿದಂತೆ ಕ್ಯಾಂಟರ್ ನಲ್ಲಿದ್ದ ಇಬ್ಬರು  ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆಯಿಂದ ಕ್ಯಾಂಟರ್ ನಲ್ಲಿದ್ದ ನೂರಾರು ಲೀಟರ್ ಹಾಲಿನ ಪ್ಯಾಕೇಟ್‍ಗಳು ಚೆಲ್ಲಾಪಿಲ್ಲಿಯಾಗಿ ಹರಿಡಿಕೊಂಡಿದ್ದರೆ, ಹಲವು ಲೀಟರ್ ನಷ್ಟು ಹಾಲು ಮಣ್ಣು ಪಾಲಾಯಿತು. 

ಅಪಘಾತದ ಸುದ್ದಿ ತಿಳಿದ ಮೇಕೇರಿ ಗ್ರಾಮಸ್ಥರು ಕ್ಯಾಂಟರ್ ಚಾಲಕ ಸೇರಿದಂತೆ ಗಾಯಾಳುಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ  ದಾಖಲಿಸಿದರು. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News