ಕೆರೆಯಲ್ಲಿ ಈಗಲು ತೆರಳಿದ್ದ ನಾಲ್ವರು ಬಾಲಕರು ನೀರುಪಾಲು

Update: 2020-02-22 14:41 GMT

ಮೈಸೂರು,ಫೆ.22: ಕೆರೆಯಲ್ಲಿ ಈಜಲು ಹೋದ ನಾಲ್ವರು ಬಾಲಕರು ನೀರುಪಾಲಾಗಿರುವ ಘಟನೆ ಮೈಸೂರಿನ ಎಚ್.ಡಿ ಕೋಟೆ ತಾಲೂಕಿನ ಜಿ.ಜಿ.ಕಾಲೊನಿಯಲ್ಲಿ ಶುಕ್ರವಾರ ನಡೆದಿದೆ.

ಮೃತರನ್ನು ಕಿರಣ್ (14) ಕೆಂಡಗಣ್ಣ(12) ರೋಹಿತ್(10) ಯಶ್ವಂತ್(8) ಎಂದು ಗುರುತಿಸಲಾಗಿದೆ. ಶಿವರಾತ್ರಿ ಹಬ್ಬದ ನಿಮಿತ್ತ ಶಾಲೆಗೆ ರಜೆಯಿದ್ದ ಕಾರಣ ನಾಲ್ವರು ಬಾಲಕರು, ತಮ್ಮ ಕಾಲನಿಯಿಂದ 1 ಕಿಲೋಮೀಟರ್ ದೂರವಿರುವ ಮಲಬಾರ್ ಶೆಡ್ ಕೆರೆಗೆ ಸಂಜೆ ನಾಲ್ಕು ಗಂಟೆಗೆ ಈಜಲು ಹೋಗಿದ್ದರು. ಬಾಲಕರು ಸುಮಾರು 2 ಗಂಟೆಗಳ ಕಾಲ ಕೆರೆಯಲ್ಲಿ ಈಜಾಡಿದ್ದಾರೆ. ಕೆರೆ ಮಧ್ಯದಲ್ಲಿ ಆಳವಿದ್ದ ಕಡೆ ಬಾಲಕನೊಬ್ಬ ಈಜಿಕೊಂಡು ಹೋಗಿದ್ದು, ಈ ವೇಳೆ, ಸುಸ್ತಾಗಿ ನಿಸ್ಸಾಯಕನಾಗಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಒಬ್ಬರಂತೆ ಒಬ್ಬರಾಗಿ ಹೋದ ಬಾಲಕರು ಮೃತಪಟ್ಟಿದ್ದಾರೆ.

ನಾಲ್ವರು ಬಾಲಕರ ಮೃತದೇಹವನ್ನು ಗ್ರಾಮಸ್ಥರು ಹೊರತೆಗೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News