ಸ್ಕೂಟಿ-ಓಮ್ನಿ ಅಪಘಾತ: ಯುವಕ ಮೃತ್ಯು, ಓರ್ವ ಗಂಭೀರ

Update: 2020-02-25 17:47 GMT

ಚಿಕ್ಕಮಗಳೂರು, ಫೆ.25: ಸ್ಕೂಟಿಯಲ್ಲಿ ಬೆಂಗಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಪ್ರವಾಸ ಬಂದಿದ್ದ ಇಬ್ಬರು ಯುವಕರು ಹಿಂದಿರುಗುತ್ತಿದ್ದ ವೇಳೆ ಓಮ್ನಿ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಜಿಲ್ಲೆಯ ಕೆಳಗೂರು ಗ್ರಾಮದಲ್ಲಿ ವರದಿಯಾಗಿದೆ.

ಬೆಂಗಳೂರಿನಲ್ಲಿ ಅಮೆಜಾನ್ ಕಂಪೆನಿಯ ಉದ್ಯೋಗಿಗಳಾದ ರಾಜಾಜಿನಗರದ ದಿನಕರ್(28) ಮೃತಪಟ್ಟ ಯುವಕನಾಗಿದ್ದು, ಬಾಣಸವಾಡಿ ನಿವಾಸಿ ಗಂಗರಾಜು(31) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವ ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಸ್ಕೂಟಿಯಲ್ಲಿ ಮಲೆನಾಡಿನ ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವಕರು ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೊರನಾಡು ದೇವಾಲಯಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ವೇಳೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗೂರು ಎಂಬಲ್ಲಿ ರಸ್ತೆಯ ತಿರುವಿನಲ್ಲಿ ಓಮ್ನಿ ವಾಹನಕ್ಕೆ ಸ್ಕೂಟಿ ಢಿಕ್ಕಿ ಹೊಡೆದಿದೆ. ಢಿಕ್ಕಿಯಿಂದಾಗಿ ಸ್ಕೂಟಿ ಓಡಿಸುತ್ತಿದ್ದ ದಿನಕರ್ ಹಾಗೂ ಗಂಗರಾಜು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ಸೇರಿಸಲು ಸಾಗಿಸುತ್ತಿದ್ದ ವೇಳೆ ದಿನಕರ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News