ಹೊದಿಕೆ ಕೊಡದ ಕಾರಣಕ್ಕೆ ಡಾಬಾ ಮಾಲಕನ ಹತ್ಯೆಗೈದ ನೌಕರ!
Update: 2020-02-26 03:49 GMT
ನಾಗ್ಪುರ, ಫೆ.26: ಹೊದಿಕೆ ಕೊಡಲಿಲ್ಲ ಎಂಬ ಕಾರಣಕ್ಕೆ ಮಾಲಕನನ್ನು ಹತ್ಯೆ ಮಾಡಿದ ಡಾಬಾ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ನಾಗ್ಪುರ- ಜಬಲ್ಪುರ ಹೆದ್ದಾರಿಯ ವಡಂಬಾ ಗ್ರಾಮದ ಬಳಿ ಇರುವ ಡಾಬಾದಲ್ಲಿ ಈ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಆರೋಪಿಯನ್ನು ಕರ ನಾರಾಯಣ ಸಿಶಂಗ್ ಬವಾಡ್ (50) ಎಂದು ಗುರುತಿಸಲಾಗಿದೆ. ಪ್ರಖಾಶ್ ಬಾಲಗೋವಿಂದ್ ಜೈಸ್ವಾಲ್ (53) ಹತ್ಯೆಗೀಡಾದ ಮಾಲಕ. ಕಬ್ಬಿಣದ ರಾಡ್ನಿಂದ ಮಾಲಕನ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಜಾನೆ 5ರ ಸುಮಾರಿಗೆ ತೀವ್ರ ಚಳಿ ಇದ್ದ ಕಾರಣ ನಿದ್ದೆಯಿಂದ ಎದ್ದ ಉದ್ಯೋಗಿ, ಮಾಲಕನಲ್ಲಿ ಹೊದಿಕೆ ಕೇಳಿದ. ಕೊಡದಿದ್ದಾಗ ಕೋಪಗೊಂಡ ಉದ್ಯೋಗಿ, ಮಾಲಕನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಸಾಯಿಸಿದ ಎಂದು ದೇವಲಾಪುರ ಪೊಲೀಸರು ಘಟನೆಯ ವಿವರ ನೀಡಿದ್ದಾರೆ.
ಗದ್ದಲ ಕೇಳಿಸಿಕೊಂಡು ಇತರ ಉದ್ಯೋಗಿಗಳು ಮಾಲಕನ ರಕ್ಷಣೆಗೆ ಆಗಮಿಸುವ ಮುನ್ನವೇ ಕುಸಿದು ಬಿದ್ದ ಜೈಸ್ವಾಲ್ ಮೃತಪಟ್ಟರು ಎಂದು ಹೇಳಲಾಗಿದೆ.