ದಿಲ್ಲಿ ಹಿಂಸಾಚಾರ ಗೃಹ ಸಚಿವಾಲಯದ ವೈಫಲ್ಯ: ರಜಿನಿಕಾಂತ್

Update: 2020-02-27 05:56 GMT

ಚೆನ್ನೈ: 27 ಜನರನ್ನು ಬಲಿಪಡೆದ ದಿಲ್ಲಿ ಹಿಂಸಾಚಾರದ ಬಗ್ಗೆ ನಟ, ರಾಜಕಾರಣಿ ರಜಿನಿಕಾಂತ್ ಪ್ರತಿಕ್ರಿಯಿಸಿದ್ದು, ಇದು ಗೃಹ ಸಚಿವಾಲಯ ಮತ್ತು ಕೇಂದ್ರ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯ ಎಂದಿದ್ದಾರೆ.

"ಖಂಡಿತವಾಗಿಯೂ ಇದು ಕೇಂದ್ರ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯ. ನಾನು ಕೇಂದ್ರ ಸರಕಾರವನ್ನು ಖಂಡಿಸುತ್ತೇನೆ. ಪ್ರತಿಭಟನೆಗಳನ್ನು ಕಠಿಣವಾಗಿ ನಿಗ್ರಹಿಸಬೇಕು. ಗುಪ್ತಚರ ಇಲಾಖೆಯು ಅದರ ಕೆಲಸಗಳನ್ನು ಮಾಡಿಲ್ಲ. ಗುಪ್ತಚರ ಇಲಾಖೆಯ ವೈಫಲ್ಯವೆಂದರೆ ಗೃಹ ಸಚಿವಾಲಯದ ವೈಫಲ್ಯ" ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News