ದಿಲ್ಲಿ ಹಿಂಸಾಚಾರದ ಹೊಣೆಯನ್ನು ಕೇಂದ್ರ ಗೃಹ ಇಲಾಖೆ ಹೊರಬೇಕು: ಎಚ್.ಡಿ.ದೇವೇಗೌಡ

Update: 2020-02-28 16:50 GMT

ಬೆಂಗಳೂರು, ಫೆ,28: ದಿಲ್ಲಿ ಹಿಂಸಾಚಾರ ಘಟನೆಯ ಹೊಣೆಯನ್ನು ಕೇಂದ್ರ ಗೃಹ ಇಲಾಖೆ ಹೊರಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಪಾದಿಸಿದ್ದಾರೆ.

ಶುಕ್ರವಾರ ಇಲ್ಲಿನ ಜೆಪಿ ಭವನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ಆಗುತ್ತಿತ್ತು. ಬಿಜೆಪಿ ಮತ್ತು ಅದರ ಬೆಂಬಲಿತ ಪಕ್ಷಗಳು ಬಿಟ್ಟು ಉಳಿದವರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದರು ಎಂದು ದೇವೇಗೌಡ ತಿಳಿಸಿದರು.

ಗೃಹ ಸಚಿವ ಅಮಿತ್ ಶಾ ಈ ಕಾನೂನು ಜಾರಿಗೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಾಗ ಹೆಚ್ಚು ಹಿಂಸಾತ್ಮಕ ಘಟನೆ ನಡೆದಿದೆ. ದೆಹಲಿ ಘಟನೆಯಲ್ಲಿ ಕೇಂದ್ರ ಸರರ್ಕರದ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ದೇವೇಗೌಡ ಆರೋಪ ಮಾಡಿದರು.

ಟ್ರಂಪ್ ಬಂದಾಗ ಅ ಕಡೆ ಗಮನ ಹರಿಸಿ ಪ್ರತಿಭಟನೆ ಕಡೆ ಗಮನ ಹರಿಸಿಲ್ಲ. ಹೀಗಾಗಿ ಈ ಘಟನೆಯಲ್ಲಿ ಕೇಂದ್ರ ಸರಕಾರದ ವೈಫಲ್ಯ ಕಾಣಿಸುತ್ತಿದೆ ಎಂದರು. ದೆಹಲಿಯಲ್ಲಿ ಇಂತಹ ಘಟನೆ ಆಗಬಾರದಿತ್ತು. ಈ ಘಟನೆ ತಲೆ ತಗ್ಗಿಸುವ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿರಾ ಗಾಂಧಿ ಕಾಲದಲ್ಲಿ ಈ ರೀತಿಯ ಘಟನೆಗಳಾಗಿದ್ದವು. ಇದೀಗ ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ. ಈಗ ದೆಹಲಿ ಸಹಜ ಸ್ಥಿತಿಯತ್ತ ಬರುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News