ಗಣಿ ಉದ್ಯಮಿಯ ಕಚೇರಿ, ಮನೆ ಮೇಲೆ ಐಟಿ ದಾಳಿ

Update: 2020-03-04 18:35 GMT

ಚಾಮರಾಜನಗರ: ನಗರದ ಪ್ರಭಾವಿ ಗಣಿ ಉದ್ಯಮಿ ಅನಂತ್ ಕುಮಾರ್ ರವರಿಗೆ ಸೇರಿದ ಬಿಳಿಗಿರಿ ಗ್ರ್ಯಾನೈಟ್ ಕಚೇರಿ ಮತ್ತು ಮೈಸೂರು ಕುವೆಂಪು ನಗರದಲ್ಲಿರುವ ಅವರ ಮನೆ ಮೇಲೆ ಏಕ ಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚಾಮರಾಜನಗರ ತಾಲೂಕಿನ ಬದನಗುಪ್ಪೆ ಬಳಿ ಇರುವ ಕೈಗಾರಿಕಾ ವಲಯದಲ್ಲಿರುವ ಬಿಳಿಗಿರಿ ಗ್ರ್ಯಾನೈಟ್ ಕಚೇರಿ ಇದಾಗಿದೆ. ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕರಿಕಲ್ಲು ಗಣಿ ಕ್ವಾರಿಯನ್ನು ಪ್ರಭಾವಿ ಉದ್ಯಮಿ ಅನಂತ್ ಕುಮಾರ್ ಹೊಂದಿದ್ದರು. ಇವರು ವಿದೇಶಗಳಿಗೆ ಗ್ರ್ಯಾನೈಟ್ ಎಕ್ಸ್ ಪೋರ್ಟ್ ಮಾಡುವ ಗಣಿ ಉದ್ಯಮಿಯಾಗಿದ್ದಾರೆ.

ಬೆಂಗಳೂರು ರಿಜಿಸ್ಟ್ರೇಷನ್ ಹೊಂದಿದ ನಾಲ್ಕು ಇನ್ನೋವ ಕಾರುಗಳಲ್ಲಿ ಬಂದ ಐಟಿ ಅಧಿಕಾರಿಗಳ ತಂಡ, ಅಧಿಕಾರಿಗಳ ರಕ್ಷಣೆಗಾಗಿ ಕೇಂದ್ರ ಮೀಸಲು ಪಡೆಯೊಂದಿಗೆ ಆಗಮಿಸಿ ದಾಳಿ ನಡೆಸಿದೆ.

ಏಕಕಾಲದಲ್ಲಿ ಗ್ರಾನೈಟ್ ಕಚೇರಿ ಹಾಗೂ ಗಣಿ ಉದ್ಯಮಿಯ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಕಚೇರಿ ಮತ್ತು ಮನೆಗಳಲ್ಲಿ ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News