ಹೊಲದಲ್ಲಿ ಮಲಗಿದ್ದ ಗ್ರಾಪಂ ಉಪಾಧ್ಯಕ್ಷನ ಬರ್ಬರ ಹತ್ಯೆ
Update: 2020-03-05 10:48 IST
ವಿಜಯಪುರ, ಮಾ.5: ರಾತ್ರಿ ಹೊಲದಲ್ಲಿ ಮಲಗಿದ ವೇಳೆ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಗ್ರಾಮದಲ್ಲಿ ನಡೆದಿದೆ.
ಯರಗಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರಣಪ್ಪಪುಟಾಣಿ(55) ಕೊಲೆಯಾದವರು.
ಶರಣಪ್ಪ ರಾತ್ರಿಯಲ್ಲಿ ಹೊಲದಲ್ಲಿ ಮಲಗುತ್ತಿದ್ದರು. ಎಂದಿನಿಂದ ಕಳೆದ ರಾತ್ರಿ ಮಲಗಿದ್ದ ಶರಣಪ್ಪರ ಕುತ್ತಿಗೆಯನ್ನು ಕೊಡಲಿಯಿಂದ ಕುಯ್ದು ಕೊಲೆಗೈಯಲಾಗಿದೆ. ಘಟನಾ ಸ್ಥಳಕ್ಕೆ ಸಿಂಧಗಿ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ.