ಎಮ್ಮೆಮಾಡು ಜಮಾಅತ್ ಮಂಡಳಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ
Update: 2020-03-09 13:27 GMT
ಮಡಿಕೇರಿ, ಮಾ.9: ಕ್ಷುಲ್ಲಕ ಕಾರಣಕ್ಕೆ ಎಮ್ಮೆಮಾಡು ಜಮಾಅತ್ ಮಂಡಳಿ ಸದಸ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.
ಜಮಾಅತ್ ಮಂಡಳಿ ಸದಸ್ಯ ಮೊಯ್ದು ಎಂಬವರೇ ಹಲ್ಲೆಗೊಳಗಾದವರಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿವಾರ ರಾತ್ರಿ ಮೊಯ್ದು ಅವರು ಮನೆಗೆ ತೆರಳುವ ಸಂದರ್ಭ ಘಟನೆ ನಡೆದಿದ್ದು, ಪರಿಚಯಸ್ಥರಿಂದಲೇ ಹಲ್ಲೆ ನಡೆದಿರುವ ಬಗ್ಗೆ ದೂರು ದಾಖಲಾಗಿದೆ. ಆರೋಪಿಗಳು ಪರಾರಿಯಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.