ಹನೂರು: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

Update: 2020-03-11 12:19 GMT

ಹನೂರು: ತಾಲೂಕಿನ ರಾಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮುತ್ತುರಾಮನ್, ಉಪಾಧ್ಯಕ್ಷರಾಗಿ ಮೊಟ್ಟಯ್ಯಗೌಂಡರ್  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಬೇರೆ ಯಾರು ಕೂಡ ನಾಮಪತ್ರ ಸಲ್ಲಿಸದಿದ್ದರಿಂದ ನೂತನ ಅಧ್ಯಕ್ಷರಾಗಿ ಮುತ್ತುರಾಮನ್, ಉಪಾಧ್ಯಕ್ಷರಾಗಿ ಮೋಟ್ಟಯ್ಯಗೌಂಡರ್ ಅವಿರೋಧವಾಗಿ ಆಯ್ಕೆಯಾದರು.

ಇವರನ್ನು ವೇಳೆ ಜಿಪಂ ಸದಸ್ಯ ಬಸವರಾಜು ಮತ್ತು ಸಂಘದ ಮಾಜಿ ಅಧ್ಯಕ್ಷರಾದ ಗಜೇಂದ್ರ, ನಿರ್ದೇಶಕರಾದ ಮಾದೇಶ್.ಎಮ್, ಕೃಷ್ಣಮೂರ್ತಿ ಸಿ ಮಹದೇವ್, ಕೃಷ್ಣನಾಯ್ಕ, ಕೃಷ್ಣಮೂರ್ತಿ ಕೆ, ಸಿಂಗಾರ್‍ವೇಲನ್, ರಾಣಿ, ಜ್ಯೋತಿ.ಸಿ ಸುರೇಶ್ ಅಭಿನಂದಿಸಿದರು. ಜಿಪಂ ಸದಸ್ಯ ಬಸವರಾಜು ಮಾತನಾಡಿದರು.

ಇದೇ ವೇಳೆ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಶಾಸಕ ನರೇಂದ್ರ ಹಾಗೂ ನೂತನ ನಿರ್ದೇಶಕರಿಗೆ ಜೈಕಾರ ಕೂಗಿದರು. ಚುನಾವಣೆ ಕಾರ್ಯದಲ್ಲಿ ಅಧಿಕಾರಿ ಸಿದ್ದಲಿಂಗ ಮೂರ್ತಿ, ಬ್ಯಾಂಕ್ ಮೇಲ್ವಿಚಾರಕ ಸತೀಶ್ ಹಾಗೂ ಸಿಎಒ ಪ್ರಭಾಕರ್ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News