ಶಾಸಕ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್ ಮುಖಂಡ ಶಿವಮೂರ್ತಿ ಬೆಂಬಲಿಗರ ನಡುವೆ ಮಾತಿನ ಚಕಮಕಿ

Update: 2020-03-14 17:54 GMT

ಮೈಸೂರು,ಮಾ.14: ಶಾಸಕ ಜಿ.ಟಿ.ದೇವೇಗೌಡ ಮತ್ತು ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.

ಬೆಳವಾಡಿ ಗೇಟ್ ನಲ್ಲಿ ಜಿ.ಟಿ.ದೇವೇಗೌಡ ಮತ್ತು ಶಿವಮೂರ್ತಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದ್ದು, ರಸ್ತೆ ಕಾಮಗಾರಿಗೆ ಜಿ.ಟಿ.ದೇವೇಗೌಡ  ಶಿಲಾನ್ಯಾಸ ನೆರವೇರಿಸುವ ವೇಳೆ ಗಲಾಟೆ ನಡೆದಿದೆ ಎನ್ನಲಾಗಿದೆ. ಜಿ.ಟಿ.ದೇವೇಗೌಡ ಜೊತೆ ಗಲಾಟೆ ಮಾಡುತ್ತಿದ್ದ ಶಿವಮೂರ್ತಿ ಮೇಲೆ ಜಿ.ಟಿ.ದೇವೇಗೌಡ ಬೆಂಬಲಿಗರು ಹರಿಹಾಯ್ದರು. ಪರಸ್ಪರ ತಳ್ಳಾಟ, ಕೂಗಾಟ ಮಾಡಿಕೊಂಡಿದ್ದು,  ಪೊಲೀಸರ ಸಮ್ಮುಖದಲ್ಲೇ ಪರಸ್ಪರ ಬೈದಾಡಿಕೊಂಡಿದ್ದಾರೆ. ಕೆಲಕಾಲ ಗದ್ದಲ, ಗಲಾಟೆ ನಡೆದಿದ್ದು, ರಸ್ತೆ ಕಾಮಗಾರಿಯಲ್ಲಿ ತಾರತಮ್ಯ ಮಾಡುತ್ತೀರಿ ಎಂದು  ಜಿ.ಟಿ.ದೇವೇಗೌಡರಿಗೆ ಶಿವಮೂರ್ತಿ ಬೆಂಬಲಿಗರು ಘೇರಾವ್ ಹಾಕಿದ ಘಟನೆಯೂ ನಡೆದಿದೆ ಎಂದು ತಿಳಿದು ಬಂದಿದೆ.

ಮೊದಲು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಹೋಗಿ ಎಂದು ಶಿವಮೂರ್ತಿ ಬೆಂಬಲಿಗರು ಹೇಳಿದ್ದು, ಈ ಹಿಂದೆಯೂ ಕೂಡ ಇದೇ ಗ್ರಾಮದಲ್ಲಿ  ಜಿ.ಟಿ.ದೇವೇಗೌಡರ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News