ಏಸು ಕ್ರಿಸ್ತನ ಬಗ್ಗೆ ಸೂಲಿಬೆಲೆ ಟ್ವೀಟ್ ಗೆ ಚಿತ್ರನಟ ಧನಂಜಯ್ ತಿರುಗೇಟು

Update: 2020-03-17 15:46 GMT
ಧನಂಜಯ್(Photo: Facebbok)- ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು, ಮಾ.17: ಕೊರೋನ ಸಾಂಕ್ರಮಿಕ ರೋಗ ಕುರಿತು ಎಲ್ಲೆಡೆ ಜನರು ಭಯಭೀತರಾಗಿದ್ದಾರೆ. ಆದರೆ, ಕೊರೋನ ಸುದ್ದಿಯನ್ನಿಟ್ಟುಕೊಂಡು, ಏಸು ಕ್ರಿಸ್ತನ ಬಗ್ಗೆ ಪ್ರಸ್ತಾಪಿಸಿ ಧರ್ಮದ ಬಗ್ಗೆ ವ್ಯಂಗ್ಯಭರಿತ ಬರಹ ಪ್ರಕಟಿಸಿದ ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆಗೆ ಚಿತ್ರನಟ ಧನಂಜಯ್ ತಿರುಗೇಟು ನೀಡಿದ್ದಾರೆ.

ಕೊರೋನ ವೈರಸ್‌ನಿಂದ ತತ್ತರಿಸಿ ಹೋಗಿರುವ ಇಟಲಿಯಲ್ಲಿ 80 ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಶುಶ್ರೂಷೆ ಮಾಡಲು ಹಿಂದೆ ಮುಂದೆ ನೋಡಲಾಗುತ್ತಿದೆ. ಹೆಚ್ಚಿನ ರೋಗಿಗಳಿದ್ದರೆ ವಯಸ್ಸಿನ ಮಾನದಂಡದ ಅಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿಯೊಂದನ್ನು ವೆಬ್‌ಸೈಟ್‌ವೊಂದು ಪ್ರಕಟಿಸಿದೆ. ಈ ಸುದ್ದಿಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ, ಏಸು ಕ್ರಿಸ್ತ ಎಲ್ಲರನ್ನೂ ಪ್ರೀತಿಸುತ್ತಾರೆ ಎಂದು ವ್ಯಂಗ್ಯಭರಿತ ಬರಹ ಪ್ರಕಟಿಸಿದ್ದಾರೆ.

ಈ ಟ್ವೀಟ್ ಬಗ್ಗೆ ನೆಟ್ಟಿಗರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೊರೋನ ವಿಷಯದಲ್ಲೂ ಧರ್ಮವನ್ನು ಎಳೆದು ತಂದಿದ್ದಾರೆನ್ನಲಾದ ಸೂಲಿಬೆಲೆ ಚಕ್ರವರ್ತಿಯ ಟ್ವೀಟ್‌ಗೆ ಉತ್ತರಿಸಿರುವ ಚಿತ್ರನಟ ಧನಂಜಯ್, ‘ಏನಾದರು ಆಗು ಮೊದಲು ಮಾನವನಾಗು’ ಎಂಬ ಕುವೆಂಪು ಅವರ ಸಾಲಿನ ಮೂಲಕ ತಿರುಗೇಟು ನೀಡಿದ್ದು, ಅವರ ಈ ಬರಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News