‘ನನಗೆ ನಾಯಿ ಕಚ್ಚಿದೆ, ಬಿಟ್ಟು ಬಿಡಿ': ಲಾಕ್ ಡೌನ್ ನಡುವೆ ಪೊಲೀಸರಿಗೆ ಹೀಗೊಂದು ಫಲಕ

Update: 2020-03-27 16:49 GMT

ಬೆಳಗಾವಿ, ಮಾ.27: ಕೊರೋನ ಹಿನ್ನೆಲೆ ಸೋಂಕು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು, ವ್ಯಕ್ತಿಯೋರ್ವರು 'ನಾಯಿ ಕಡಿದಿದೆ ಬಿಟ್ಟು ಬಿಡಿ' ಎಂಬ ಫಲಕ ಹಿಡಿದು ಸಂಚಾರ ಮಾಡಿದ ಘಟನೆ ನಡೆದಿದೆ.

ಶುಕ್ರವಾರ ಈ ಘಟನೆ ನಡೆದಿದ್ದು, ನಾಯಿ ಕಡಿತಕ್ಕೊಳಗಾದ ಖಾನಾಪುರ ಪಟ್ಟಣದ ವ್ಯಕ್ತಿಯೊಬ್ಬ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಆಗಮಿಸುವ ಮಾರ್ಗ ಮಧ್ಯದಲ್ಲಿ ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು 'ನಾಯಿ ಕಡಿದಿದೆ. ನಾವು ಆಸ್ಪತ್ರೆಗೆ ಹೋಗಬೇಕು ದಯವಿಟ್ಟು ಬಿಡಿ' ಎಂಬ ಬರಹವುಳ್ಳ ಫಲಕ ಹಿಡಿದು ಸಂಚಾರ ಮಾಡಿದ್ದಾರೆ.

ಇನ್ನು, ಈ ಫಲಕದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕೆಲವರು ವ್ಯಂಗ್ಯವಾಡಿದರೆ, ಮತ್ತೆ ಕೆಲವರು ಕನಿಕರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News