ಸಿಎಂ ಪರಿಹಾರ ನಿಧಿಗೆ ಕೈಗಾರಿಕೋದ್ಯಮಿಗಳ ದೇಣಿಗೆ

Update: 2020-03-31 16:19 GMT

ಬೆಂಗಳೂರು, ಮಾ. 31: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಕೈಗಾರಿಕೋದ್ಯಮಿಗಳು ಕೈಜೋಡಿಸಿದ್ದು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಸಿ ಫಂಡ್(ಸಿಎಸ್‍ಆರ್)ನಿಂದ ದೊಡ್ಡ ಮೊತ್ತದ ದೇಣಿಗೆ ನೀಡಲಾಗಿದೆ.

ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಗಳಲ್ಲಿ ಒಂದಾದ ಏಷಿಯನ್ ಪೇಂಟ್ಸ್ ಕಂಪೆನಿ-2 ಕೋಟಿ ರೂ.ಗಳನ್ನೂ ಈಗಾಗಲೇ ಘೋಷಿಸಿದೆ. ಅದೇ ರೀತಿಯಲ್ಲಿ ಟೊಯೋಟಾ ಇಂಡಸ್ಟ್ರಿಸ್ ಎಂಜಿನ್ ವತಿಯಿಂದ 31ಲಕ್ಷ ರೂ., ಜಿಯೋಮಿ ಟೆಕ್ನಾಲಜಿ ಮತ್ತು ಜೆ.ಎಂ.ಫಿನಾಯಿಲ್ಸ್ ಕಂಪೆನಿಗಳು ತಲಾ 25 ಲಕ್ಷ ರೂ., ಟೊಯೋಟಾ ಕಿರ್ಲೋಸ್ಕರ್ ಆಟೋಪಾಟ್ರ್ಸ್‍ನಿಂದ 23ಲಕ್ಷ ರೂ., ಕೆನ್ನಾ ಮೆಟಲ್ಸ್ 15ಲಕ್ಷ ರೂ., ಬ್ರಿಗೇಡ್ ಎಂಟರ್ ಪ್ರೈಸಸ್ 10 ಲಕ್ಷ ರೂ.ಗಳನ್ನು ನೀಡುವುದಾಗಿ ಪ್ರಕಟಿಸಿವೆ ಎಂದು ತಿಳಿಸಲಾಗಿದೆ.

ಸ್ಯಾಮ್ ಸಂಗ್ ಆರ್ ಆ್ಯಂಡ್ ಡಿ ಕಂಪೆನಿ 1 ಕೋಟಿ ರೂ. ಮೊತ್ತದ ಹೆಲ್ತ್ ಕಿಟ್ ಅನ್ನು ಕೊರಿಯಾ ದೇಶದಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ಘೋಷಿಸಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ 30 ಲಕ್ಷ ರೂ.ದೇಣಿಗೆ ಸಹಿತ ನರ್ಸ್‍ಗಳಿಗೆ 500 ಬಾಡಿ ಸೂಟ್, 5 ಸಾವಿರ ಎನ್. ಮಾಸ್ಕ್ ಹಾಗೂ ರಾಮನಗರದ ಬಡ ಕುಟುಂಬಗಳಿಗೆ ಊಟವನ್ನು ಒದಗಿಸುತ್ತಿದೆ ಎಂದು ತಿಳಿಸಲಾಗಿದೆ.

ಹಿಮಾಟ್ಸಿಂಗ್ ಸೈಡ್ ಲಿ. 10 ಕೋಟಿ ರೂ. ಮೊತ್ತದ ಪಿಲ್ಲೋ ಕವರ್, ಬೆಡ್‍ಶಿಟ್, ಟವಲ್‍ಗಳನ್ನು ನೀಡುವ ಹೊಣೆಯನ್ನು ಹೊತ್ತಿದೆ. ಇದರ ಜೊತೆಗೆ ಬ್ರಿಟಾನಿಯಾ ಇಂಡಸ್ಟ್ರಿ, ವಿಪ್ರೋ, ಜೆಎಸ್‍ಕೆ, ಜ್ಯೋತಿಲಾಲ್ ಮೆಡಿಸನ್ ಕಂಪೆನಿಗಳು ಆರೋಗ್ಯ ಕಿಟ್ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಯನ್ನು ಘೋಷಿಸಿವೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News