ನೀವು ಧರ್ಮಾಂಧತೆಯನ್ನು ತುಂಬಲು ನಿಝಾಮುದ್ದೀನ್ಗೆ ಹೋಗಿದ್ದೀರಿ: ಸಂಸದ ಪ್ರತಾಪ್ ಸಿಂಹ
Update: 2020-04-02 13:36 GMT
ಮೈಸೂರು,ಎ.2; ದೆಹಲಿಯ ನಿಝಾಮುದ್ದೀನ್ಗೆ ನೀವೇನು ಘನಕಾರ್ಯ ಮಾಡಲು ಹೋಗಿದ್ದೀರಿ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಹಾಗಾಗಿ ಸರಿಯಾದ ಮಾಹಿತಿ ನೀಡಿ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ಧರ್ಮಸಭೆಗೆ ಯಾವ ಘನಕಾರ್ಯ ಮಾಡಲು ಹೋಗಿದ್ದೀರಿ ಎಂಬುದು ಗೊತ್ತಿದೆ. ನೀವು ಧರ್ಮಾಂಧತೆಯನ್ನು ತುಂಬಲು ಅಲ್ಲಿಗೆ ಹೋಗಿದ್ದು ಎಂಬುದೂ ಗೊತ್ತಿದೆ. ದಯವಿಟ್ಟು ಯಾರು ಅಲ್ಲಿಗೆ ಹೋಗಿದ್ದಿರಿ ಎಂಬ ಮಾಹಿತಿಯನ್ನು ನೀಡಿ ಎಂದು ಹೇಳಿದರು.
ಯಾರು ಅಲ್ಲಿಗೆ ಹೋಗಿದ್ದೀರಿ, ಅವರಿಗೆಲ್ಲಾ ಊಟ ವಸತಿಯ ವ್ಯವಸ್ಥೆ ಮಾಡುತ್ತೇವೆ. ಬೇರೆ ಏನನ್ನೂ ನಿಮ್ಮಿಂದ ನಿರೀಕ್ಷಿಸುವುದಿಲ್ಲ, ಬೇರೆಯವರಿಗೆ ಕೊರೋನ ಸೋಂಕು ಹರಡಬೇಡಿ ಎಂದು ಹೇಳಿದರು.