ಪ್ರಧಾನಿಯ ಕರೆಗೆ ಸ್ಪಂದಿಸುವಂತೆ ಕೊಡಗು ಜಿಲ್ಲೆಯ ಖಾಝಿಗಳ ಕರೆ

Update: 2020-04-03 18:10 GMT

ಮಡಿಕೇರಿ, ಎ.3: ದೇಶದ ಜನತೆಯನ್ನು ಕಾಡುತ್ತಿರುವ ಕೊರೋನ ಎಂಬ ಮಾರಕ ರೋಗದ ವಿರುದ್ಧ ಏಕತೆಯಿಂದ ಹೋರಾಡುವ ಸಲುವಾಗಿ ಎ. 5 ರಂದು ರವಿವಾರ ರಾತ್ರಿ ದೀಪ ಬೆಳಗುವ ಮೂಲಕ ಐಕ್ಯತೆಯನ್ನು ಪ್ರದರ್ಶಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಕರೆಗೆ ಸ್ಪಂದಿಸುವಂತೆ ಕೊಡಗಿನ ಮುಸ್ಲಿಂ ಧರ್ಮಗುರುಗಳು ಕರೆ ನೀಡಿದ್ದಾರೆ.

ಪ್ರಧಾನಿ ತಿಳಿಸಿದಂತೆ ಅಂದು ರಾತ್ರಿ 9 ಗಂಟೆಗೆ ಜಿಲ್ಲೆಯ ಎಲ್ಲ ಮುಸ್ಲಿಮರು ತಮ್ಮ ಮನೆಮಂದಿಯೊಂದಿಗೆ ಸೇರಿಕೊಂಡು ಕೊರೋನ ರೋಗದ ನಿರ್ಮೂಲನೆಗಾಗಿ ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸುವಂತೆ ಜಿಲ್ಲೆಯ ಖಾಝಿಗಳಾದ ಹಾಜಿ ಕೆ.ಎ. ಮಹಮೂದ್ ಮುಸ್ಲಿಯಾರ್ ಹಾಗೂ ಹಾಜಿ ಎಂ.ಎಂ. ಅಬ್ದುಲ್ಲ ಮುಸ್ಲಿಯಾರ್ ಇವರುಗಳು ಎಲ್ಲ ಜಮಾತ್ ಗಳ ಪ್ರಮುಖರೊಂದಿಗೆ ವಿನಂತಿಸಿಕೊಂಡಿದ್ದಾರೆ.

ಈ ಕುರಿತು ಸಂಬಂಧಪಟ್ಟವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಉಭಯ ಖಾಝಿಗಳು ಸುತ್ತೋಲೆಯನ್ನು ಕೂಡ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News