ಕೊರೋನ ಮುಕ್ತ ಭಾರತ ಎಂದು ಯಾವಾಗ ಘೋಷಿಸುವಿರಿ: ಕೇಂದ್ರ ಸರಕಾರಕ್ಕೆ ನಟ ಉಪೇಂದ್ರ ಪ್ರಶ್ನೆ

Update: 2020-04-05 17:03 GMT

ಬೆಂಗಳೂರು, ಎ.5: ಕೊರೋನ ಮುಕ್ತ ಭಾರತ ಎಂದು ಯಾವಾಗ ಘೋಷಿಸುವಿರಿ? ಎಂದು ಕೇಂದ್ರ ಸರಕಾರದಕ್ಕೆ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಪ್ರಶ್ನಿಸಿದ್ದಾರೆ.

ಈ ಕುರಿತು ರವಿವಾರ ಟ್ವೀಟ್ ಮಾಡಿರುವ ಅವರು, "ಎಲ್ಲ ಜನನಾಯಕರಿಗೆ ಒಂದು ನೇರ ಪ್ರಶ್ನೆ..... ಕೊರೋನ ಮುಕ್ತ ಭಾರತ ಎಂದು ಯಾವಾಗ ಘೋಷಿಸುವಿರಿ ? ನೂರ ಮೂವತ್ತು ಕೋಟಿ ಜನರನ್ನೂ ತಪಾಸಣೆ ಮಾಡಿದ ನಂತರವೇ ? ಅಲ್ಲಿಯವರೆಗೂ ಲಾಕ್ಡೌನ್ ಮುಂದುವರೆಯುವುದೇ ? ಅದಕ್ಕೆ ಮುಂಚೆ ಲಾಕ್ಡೌನ್ ತೆರವು ಮಾಡಿದರೆ ಪ್ರಜೆಗಳಿಗೆ ಅಪಾಯವಲ್ಲವೇ ? ಎಂದು ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News