ಕೊರೋನ ವಿರುದ್ಧ ಸಮರದ ಜ್ಯೋತಿ...

Update: 2020-04-05 17:30 GMT

ಕೊರೋನ ವೈರಸ್ ವಿರುದ್ಧ ಹೋರಾಟದ ಏಕತೆಯ ಸಂಕೇತವಾಗಿ ಪ್ರಧಾನಿ ನರೇಂದ್ರ ಮೋದಿ ರವಿವಾರ ರಾತ್ರಿ 9 ಗಂಟೆಗೆ ದಿಲ್ಲಿಯ ತನ್ನ ನಿವಾಸದಲ್ಲಿ ದೀಪ ಬೆಳಗಿಸಿದರು. ಪ್ರಧಾನಿ ನೀಡಿದ ಕರೆಯಂತೆ ದೇಶಾದ್ಯಂತ ಜನತೆ ದೀಪ ಬೆಳಗಿಸಿ ಸೋಂಕಿನ ವಿರುದ್ಧ ಹೋರಾಟದಲ್ಲಿ ಏಕತೆ ಪ್ರದರ್ಶಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ತಮ್ಮ ಕಾವೇರಿ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ 9 ನಿಮಿಷಗಳ ಕಾಲ ದೀಪ ಬೆಳಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor