ದೀಪ ಬದಿಗಿಟ್ಟು ಬುದ್ಧ, ಬಸವಣ್ಣ, ಅಂಬೇಡ್ಕರ್ ಫೋಟೋ ಪ್ರದರ್ಶಿಸಿದ ಸತೀಶ್ ಜಾರಕಿಹೊಳಿ

Update: 2020-04-06 04:12 GMT

ಬೆಳಗಾವಿ, ಎ.6: ಕೊರೋನ ಸೋಂಕು ಸಂಬಂಧ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಂತೆ ಬಹುತೇಕ ಜನರು ರವಿವಾರ ರಾತ್ರಿ 9 ಗಂಟೆಗೆ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ, ಹಣತೆ, ಮೇಣದ ಬತ್ತಿಗಳನ್ನು ಹಚ್ಚಿದ್ದರು. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಫೋಟೋ ಪ್ರದರ್ಶಿಸಿ ಗಮನ ಸೆಳೆದರು.

ರವಿವಾರ ರಾತ್ರಿ ತಮ್ಮ‌ ನಿವಾಸದಲ್ಲಿ ಮಕ್ಕಳೊಂದಿಗೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಫೋಟೋ ಪ್ರದರ್ಶಿಸಿದರು. ಇದಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಬೇಕಾಗಿರುವುದು ಉನ್ನತ ವ್ಯಕ್ತಿಗಳ ವಿಚಾರಧಾರೆ ಹೊರತು ದೀಪ ಅಲ್ಲ ಎಂದು ಬರೆದ ಫಲಕ ಪ್ರದರ್ಶಿಸುವ ಜೊತೆಗೆ

ಬುದ್ಧ, ಬಸವಣ್ಣ, ಅಂಬೇಡ್ಕರ್ ಫೋಟೋ ಪ್ರದರ್ಶಿಸಿ ಇವರ ವಿಚಾರಧಾರೆ ದೇಶಕ್ಕೆ ಬೇಕಾಗಿದೆ ಎಂದು ಮೌನವಾಗಿಯೇ ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News