ಬೆಳಗಾವಿ: ಮಸೀದಿಗೆ ನುಗ್ಗಿ ಧರ್ಮಗುರುವಿನ ಮೇಲೆ ಹಲ್ಲೆ ಆರೋಪ; 13 ಮಂದಿ ವಿರುದ್ಧ ಎಫ್ಐಆರ್

Update: 2020-04-06 16:31 GMT

ಬೆಳಗಾವಿ, ಎ.6: ಮಸೀದಿಯನ್ನು ಸ್ವಚ್ಛಗೊಳಿಸಲು ತೆರಳಿದ್ದ ಧರ್ಮಗುರುವಿನ ಮೇಲೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಗಂಭೀರ ಹಲ್ಲೆ ನಡೆಸಿರುವ ಕೃತ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬೇಡಕಿಹಾಳ ಗ್ರಾಮದ ಮಸೀದಿ ಮೌಲಾನ ನದಾಫ್ ಎಂಬವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
'ಮಸೀದಿಯಲ್ಲಿ ಯಾರೂ ಇರಬಾರದು ಎಂದು ಹೇಳಿದ್ದರೂ ಏಕೆ ಇಲ್ಲಿ ಇದ್ದೀರ ಎಂದು ಗುಂಪೊಂದು ಪ್ರಶ್ನಿಸಿ ಮೌಲಾನ ನದಾಫ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ 13 ಮಂದಿಯ ವಿರುದ್ಧ ಸದಲಗಾ ಪೊಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News