ರಾಜ್ಯದಲ್ಲಿ 25 ಕೊರೋನ ಸೋಂಕಿತರು ಗುಣಮುಖ: ಸಚಿವ ಬಿ.ಶ್ರೀರಾಮುಲು

Update: 2020-04-07 12:37 GMT

ಬೆಂಗಳೂರು, ಎ.7: ಕರ್ನಾಟಕದಲ್ಲಿ ಇದುವರೆಗೆ 175 ಕೊರೋನ ಪ್ರಕರಣಗಳು ಖಚಿತಗೊಂಡಿದೆ. ಇಂದಿನವರೆಗೆ 25 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಇಂದಿನವರೆಗೆ 25 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಹರ್ಷದ ವಿಷಯವಾಗಿದೆ. ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದೆಂದು ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News