ಚಿಕ್ಕಮಗಳೂರು: ಎಪಿಎಂಸಿಯಲ್ಲಿ ಲಾಠಿ ಚಾರ್ಜ್

Update: 2020-04-08 06:50 GMT

ಚಿಕ್ಕಮಗಳೂರು : ಜನರು ಸಾಮಾಜಿಕ ಅಂತರ ಪಾಲಿಸದೆ ಅತಿರೇಕದ ವರ್ತನೆಯ ಆರೋಪದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ಇಂದು ನಡೆದಿದೆ.

ಚಿಕ್ಕಮಗಳೂರಿನ ಎಪಿಎಂಸಿಯಲ್ಲಿ ಜನವೋ ಜನ ಸೇರಿದ್ದು, ಗ್ರಾಹಕರು, ವ್ಯಾಪಾರಸ್ಥರು ಹಾಗೂ ಮಧ್ಯವರ್ತಿಗಳಿಂದ ತುಂಬಿ ಹೋಗಿದೆ. ಆದೇಶಕ್ಕಷ್ಟೇ ಸೀಮಿತವಾಗಿದೆ ಸಾಮಾಜಿಕ ಅಂತರ ಎಂಬಂತೆ ಪರಿಸ್ಥಿತಿ ಗೋಚರಿಸುತ್ತಿದ್ದು, ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ತರಕಾರಿಕೊಳ್ಳಲು ಮುಗಿಬಿದ್ದ ನೂರಾರು ಜನ ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿದ್ದರು. ಲಾಕ್ ಡೌನ್ ಉಲ್ಲಂಘಿಸಿದವರಿಗೆ ಈ ವೇಳೆ ಲಾಠಿ ಚಾರ್ಜ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News