ಶಹಾಪುರ: ಸೈಯದ್ ಷಾ ಕುಂದ್‌ಮಿರ್ ಬುಖಾರಿ ಉರೂಸ್ ಮುಂದೂಡಿಕೆ

Update: 2020-04-08 11:57 GMT

ಶಹಾಪುರ, ಎ.8: ಇಲ್ಲಿನ ಮಹೇಲ್ ರೋಜಾ ಗ್ರಾಮದ ಹಝ್ರತ್ ಸೈಯದ್ ಷಾ ಕುಂದ್‌ಮಿರ್ ಬುಖಾರಿ ದರ್ಗಾದ ಉರೂಸ್ ಕಾರ್ಯಕ್ರಮವನ್ನು ಮಂದೂಡಲಾಗಿದೆ.

ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ದರ್ಗಾದ ಪೀಠಾಧಿಪತಿ ಡಾ. ಸೈಯದ್ ಷಾ ಇಫ್ತಿಕಾರ್ ಅಹ್ಮದ್ ವಝೀರ್ ಬುಖಾರಿ ಖಾದ್ರಿ ಹಾಗೂ ಸೈಯದ್ ಗುಲಾಮ್ ಮುಹಮ್ಮದ್ ಕೈಸರ್, ದೇಶದಲ್ಲಿ ಕೋವಿಡ್ -19 ವೈರಸ್ ಹರಡುತ್ತಿದ್ದು, ನೂರಾರು ಜನರು ಸೋಂಕುಪೀಡಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸಾರ್ವಜನಿಕ ಇತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಎ.9ರಿಂದ 11ರ ವರೆಗೆ ನಡೆಯಲಿದ್ದ ಉರೂಸ್ ಸಮಾರಂಭವನ್ನು ಮೂಂದೂಡಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News