ಶಿವಮೊಗ್ಗ : ಮಗುವನ್ನು ಹತ್ಯೆಗೈದು ಮಹಿಳೆ ಆತ್ಮಹತ್ಯೆ
Update: 2020-04-09 10:26 GMT
ಶಿವಮೊಗ್ಗ : ಮಹಿಳೆಯೋರ್ವರು ತನ್ನ ಕರುಳ ಕುಡಿಯನ್ನು ಸಾಯಿಸಿ ತಾನು ನೇಣಿಗೇರಿದ ಅಮಾನವೀಯ ಘಟನೆಯೊಂದು ನಡೆದಿದೆ.
ಬೆವಳ್ಳಿ ಗ್ರಾಮದಲ್ಲಿ ಬುಧವಾರ 14 ತಿಂಗಳ ಗಂಡು ಮಗುವನ್ನು ಉಸಿರುಗಟ್ಟಿಸಿ ಸಾಯಿಸಿದ ತಾಯಿ, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆಶಿಕಾ (23), ಮಗು ಅಥರ್ವ ಮೃತರು ಎಂದು ಗುರುತಿಸಲಾಗಿದೆ. ಮಗು ಅಥರ್ವನಿಗೆ ಕಿಡ್ನಿ ತೊಂದರೆ ಇದೆ, ಶಸ್ತ್ರಚಿಕಿತ್ಸೆ ಆಗಬೇಕು ಎಂದು ವೈದ್ಯರು ಸಲಹೆ ನೀಡಿದ್ದರು ಎನ್ನಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಮಗು ಉಳಿಯುತ್ತದೆಯೋ ಇಲ್ಲವೋ ಎಂಬ ಚಿಂತೆಯಲ್ಲಿ ಮಾಸಿಕವಾಗಿ ನೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಗವಟೂರು ನಿವಾಸಿ ಈಶ್ವರಪ್ಪ ಅವರ ಪುತ್ರಿ ಆಶಿಕಾ ಅವರ ಮದುವೆಯು ಸಂಬಂಧಿ ವಿನಯ್ ಜತೆಗೆ ಎರಡೂವರೆ ವರ್ಷದ ಹಿಂದೆ ನೆರವೇರಿಸಲಾಗಿತ್ತು.