ಹೃದಯಾಘಾತ : ಕರ್ತವ್ಯದಲ್ಲಿದ್ದ ಪೌರ ಕಾರ್ಮಿಕ ಮೃತ್ಯು

Update: 2020-04-12 10:59 GMT

ಧಾರವಾಡ : ಕರ್ತವ್ಯದಲ್ಲಿದ್ದ ಪೌರ ಕಾರ್ಮಿಕನೊಬ್ಬ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಧಾರವಾಡ ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕ ಅಶೋಕ  ಮೃತರು ಎಂದು ಗುರುತಿಸಲಾಗಿದೆ.

ಗುತ್ತಿಗೆ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅಶೋಕ ಅವರು, ಇಂದು  ಹುಬ್ಬಳ್ಳಿಯ ವಾರ್ಡ್ ನಂಬರ್ 28 ರಲ್ಲಿ ಕೆಲಸ  ಮಾಡುತ್ತಿದ್ದರು.  ಸ್ವಚ್ಚತಾ ಕಾರ್ಯದಲ್ಲಿ ನಿರತನಾಗಿದ್ದಾಗ ಏಕಾಏಕಿ ಎದೆಯ ನೋವು ಕಾಣಿಸಿಕೊಂಡಿದೆ. ಎದೆ ನೋವು ಕಾಣಿಸಿಕೊಳ್ಳುತ್ತಿದಂತೆ ಕಿಮ್ಸ್‌ಗೆ ರವಾನೆ ಮಾಡಲಾಗಿದೆ. ‌ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಶೋಕ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News