ಅಂಬೇಡ್ಕರ್ ಜಯಂತಿ: 40 ವರ್ಷದ ಹಳೆ ನೆನಪು ಬಿಚ್ಚಿದ ಶಾಸಕ ಪ್ರಿಯಾಂಕ್ ಖರ್ಗೆ

Update: 2020-04-14 06:30 GMT

ಕಲಬುರಗಿ, ಎ.14: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129ನೇ ಜನ್ಮ ದಿನಾಚರಣೆಯ ಈ ಸಂದರ್ಭದಲ್ಲಿ 40 ವರ್ಷ ಹಳೆಯ ಫೋಟೋವೊಂದನ್ನು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಶೇರ್ ಮಾಡಿದ್ದಾರೆ.

ಸದ್ಯ ವಿಧಾನ ಸೌಧದ ಮುಂದೆ ಪ್ರತಿಷ್ಠಾಪಿಸಲಾಗಿರುವ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಪ್ರತಿಮೆ ನಿರ್ಮಾಣ ಹಂತದ ಪರಿಶೀಲನೆಗಾಗಿ  ಕಾಂಗ್ರೇಸ್ ನಾಯಕರಾದ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್ 40 ವರ್ಷಗಳ ಹಿಂದೆ ಮುಂಬೈಗೆ ತೆರಳಿದಾಗ ತೆಗೆದ ಅಪರೂಪದ ಚಿತ್ರವನ್ನು ಶಾಸಕರು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News