ಹುಟ್ಟೂರು ಕೊಪ್ಪದಲ್ಲಿ ಮಹೇಂದ್ರ ಕುಮಾರ್ ಅಂತ್ಯಕ್ರಿಯೆ

Update: 2020-04-25 07:21 GMT

ಚಿಕ್ಕಮಗಳೂರು, ಎ.25: ಇಂದು ಮುಂಜಾನೆ ನಿಧನರಾದ ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಂತ್ಯಕ್ರಿಯೆ ಹುಟ್ಟೂರು ಕೊಪ್ಪದ ಅವರ ತೋಟದ ಮನೆಯಲ್ಲಿ ನೆರವೇರಲಿದೆ.

ಈ ಕುರಿತು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಮಹೇಂದ್ರಕುಮಾರ್‌ರ ಪತ್ನಿಯ ಸಹೋದರಿ ರಾಧಿಕಾ, ಅವರ ಮೃತದೇಹವನ್ನು ಬೆಂಗಳೂರಿನಿಂದ ಕೊಪ್ಪಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆಯ ವೇಳೆ ಕುಟುಂಬಸ್ಥರು ಮಾತ್ರ ಉಪಸ್ಥಿತರಿರುವರು ಎಂದು ಸ್ಪಷ್ಟಪಡಿಸಿದ್ದಾರೆ.

ಮಹೇಂದ್ರ ಕುಮಾರ್ ಅವರಿಗೆ ಹೃದಯ ಸಂಬಂಧಿತ ಯಾವುದೇ ಕಾಯಿಲೆ ಇರಲಿಲ್ಲ. ಆದರೆ ಶುಕ್ರವಾರ ಮಧ್ಯರಾತ್ರಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆ ಕರೆದೊಯ್ಯಲಾಗಿತ್ತು ಎಂದು ಹೇಳಿದ್ದಾರೆ.

ಮಹೇಂದ್ರ ಕುಮಾರ್ ಅವರಿಗೆ ಹೃದಯ ಸಂಬಂಧಿತ ಕಾಯಿಲೆ ಇರಲಿಲ್ಲ ನಿಜ. ಆದರೆ ಕೆಲ ದಿನಗಳಿಂದ ಅವರಿಗೆ ಎದೆನೊವು ಕಾಣಿಸಿಕೊಂಡಿತ್ತು. ಅದರೆ ಅವರು ಇದನ್ನು ನಿರ್ಲಕ್ಷ ಮಾಡಿದ್ದರು. ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸಿ ವೈದ್ಯರನ್ನು ಸಂಪರ್ಕಿಸಿರಲಿಲ್ಲ. ಎರಡು ದಿನಗಳ ಹಿಂದೆ ನನಗೆ ಕರೆ ಮಾಡಿ, ‘‘ಗ್ಯಾಸ್ಟ್ರಿಕ್ ಮಾರಾಯ, ಹಳ್ಳಿ ಔಷಧ ಇದ್ರೆ ಹೇಳು’’ ಎಂದು ತಿಳಿಸಿದ್ದರು ಎಂದು ಮಹೇಂದ್ರಕುಮಾರ್ ಅವರ ಸಹೊದರ ಸಂಬಂಧಿ ಸಂತೋಷ್ ಎಂಬವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News