ಯಲ್ಲಾಪುರ: ನೀರಿನಲ್ಲಿ ಮುಳುಗಿ ಇಬ್ಬರು ಮಹಿಳೆಯರು, ಕುಸಿದು ಬಿದ್ದು ಓರ್ವ ಮಹಿಳೆ ಮೃತ್ಯು

Update: 2020-05-07 15:22 GMT

ಯಲ್ಲಾಪುರ, ಮೇ.7: ತಾಲೂಕಿನ ಜಕ್ಕೊಳ್ಳಿ ಸಮೀಪದ ದೊಡ್ಡಬೇಣದಲ್ಲಿ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಮತ್ತು ವಿಷಯ ತಿಳಿದ ಮತ್ತೊಬ್ಬರು ಮಹಿಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ತಡ ರಾತ್ರಿ ನಡೆದಿದೆ.

ಸರಿತಾ ಆದಿತ್ಯ ನಾಯ್ಕ(26), ಶ್ವೇತಾ ದಿನೇಶ ನಾಯ್ಕ(30) ಹಾಗೂ ಗೌರಿ ಶಿವಾ ನಾಯ್ಕ(55) ಮೃತ ಮಹಿಳೆಯರು. ಸರಿತಾ ನಾಯ್ಕ ತಮ್ಮ ತೋಟದಲ್ಲಿನ ಬಾವಿಯಿಂದ ನೀರು ತರಲು ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ಅವರನ್ನು ರಕ್ಷಿಸಲು ಅವರ ಅತ್ತಿಗೆ ಶ್ವೇತಾ ಸಹ ನೀರಿಗೆ ಹಾರಿದ್ದಾರೆ. ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಗಳು ಹಾಗೂ ಸೊಸೆ ನೀರಿನಲ್ಲಿ ಮುಳುಗಿ ಮೃತಪಟ್ಟ ವಿಷಯ ತಿಳಿದು, ಗೌರಿ ಶಿವಾ ನಾಯ್ಕ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News