ತೆಳ್ಳನೂರು: ದೇವಾಲಯದ ಬಾಗಿಲು ಮುರಿದು ಕಳ್ಳತನ

Update: 2020-05-09 09:41 GMT

ಕೊಳ್ಳೇಗಾಲ, ಮೇ 9: ತಾಲೂಕಿನ ತೆಳ್ಳನೂರು ಗ್ರಾಮದ ದಂಡಿನ ಮಾರಮ್ಮ ಎರಡು ದೇವಸ್ಥಾನಗಳ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಬೆಳ್ಳಿ ಸಾಮಗ್ರಿಗಳನ್ನು ಮತ್ತು ಗಂಟೆ ಗಳನ್ನು ಗುರುವಾರ ರಾತ್ರಿ ಕದ್ದೊಯ್ದಿದ್ದಾರೆ. 

ಶುಕ್ರವಾರ ಬೆಳಗ್ಗೆ ಗ್ರಾಮದ ಹೊರವಲಯದಲ್ಲಿ ದಂಡಿನ ಮಾರಮ್ಮನ ದೇವಸ್ಥಾನಗಳ ಬಾಗಿಲು ತೆರೆದಿರುವುದನ್ನು ಕಂಡು ಸಾರ್ವಜನಿಕರು ಅರ್ಚಕರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು, ಯಜಮಾನರು, ಗ್ರಾಮದ ಮುಖಂಡ ರು ಆಗಮಿಸಿ ನೋಡಿದಾಗ ದೇವರ ಮೂರ್ತಿ ಗೆ ಹರಕೆ ರೂಪದಲ್ಲಿ ಹಾಕಿದ್ದ ಮೂರು ಬೆಳ್ಳಿ ಛತ್ರಿ, 22 ಸಾವಿರ ರೂ. ಬೆಲೆಬಾಳುವ ಸುಮಾರು 850 ಗ್ರಾಂನ ಗಂಟೆಗಳು, 4 ಸಾವಿರ ರೂ. ಮೌಲ್ಯದ 4 ಸೀರೆಗಳು 12 ಸಾವಿರ ರೂ. ಮೌಲ್ಯ ಬೆಲೆ ಬಾಳುವ 4 ದೀಪದ ಕಂಬಗಳು ಕಳವಾಗಿರವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News