ಹಾವೇರಿ: ಮೃತದೇಹದ ಗಂಟಲು ದ್ರವ ಸಂಗ್ರಹ

Update: 2020-05-12 19:02 GMT

ಹಾವೇರಿ, ಮೇ 12: ಕುಣಿಯಲ್ಲಿ ಕೂರಿಸಿದ್ದ ಮೃತದೇಹದಿಂದ ಗಂಟಲುದ್ರವ ಸಂಗ್ರಹಿಸಿದ ಘಟನೆ ಸವಣೂರು ತಾಲೂಕಿನ ಹಿರೇಮುಗದೂರು ಗ್ರಾಮದಲ್ಲಿ ನಡೆದಿದೆ.

ಮೇ 10ರಂದು ಮೃತಪಟ್ಟಿದ್ದ ಸವಣೂರು ತಾಲೂಕಿನ ಹಿರೇಮುಗದೂರು ಗ್ರಾಮದ ವ್ಯಕ್ತಿಯೊಬ್ಬರ ಗಂಟಲು ದ್ರವವನ್ನು ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಶೋಭಾ ಎಂಬುವವರು ಪಿಪಿಇ ಕಿಟ್ ಧರಿಸಿ ಭಯದಿಂದಲೇ ಕುಣಿಯಲ್ಲಿಳಿದು ಮೃತದೇಹದ ಗಂಟಲು ದ್ರವ ಸಂಗ್ರಹ ಮಾಡಿದ್ದಾರೆ.

ವ್ಯಕ್ತಿ ಮೃತಪಟ್ಟ ಮಾಹಿತಿ ತಿಳಿದು ಲ್ಯಾಬ್ ಟೆಕ್ನಿಷಿಯನ್ ಶೋಭಾ ಅವರು ತಕ್ಷಣವೇ ಹಿರೇಮುಗದೂರು ಗ್ರಾಮಕ್ಕೆ ಹೋಗಿದ್ದರು. ಆದರೆ, ಶೋಭಾ ಅವರು ಹೋಗುವಷ್ಟರಲ್ಲಿ ಮೃತದೇಹವನ್ನ ಸಂಬಂಧಿಕರು ದಫನ್ ಮಾಡಲು ಕುಣಿಯಲ್ಲಿ ಕೂರಿಸಿದ್ದರು. ಆದ್ದರಿಂದ ಶೋಭಾ ಅವರು ದಫನ್ ಮಾಡುವ ಸ್ಥಳಕ್ಕೆ ತೆರಳಿ ಮೃತದೇಹದ ಸ್ವ್ಯಾಬ್ ಕಲೆಕ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News