ಸ್ಫೋಟಕ ಸಾಮಗ್ರಿ ಸಾಗಣೆ ಆರೋಪ: ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ

Update: 2020-05-13 13:51 GMT

ಕೊಳ್ಳೇಗಾಲ,13: ಪರವಾನಗಿ ಇಲ್ಲದೆ ಸ್ಫೋಟಕ ಸಾಮಗ್ರಿ ಸಾಗಿಸುತ್ತಿದ್ದ ಆರೋಪದಲ್ಲಿ ಶ್ರೀನಿವಾಸ್, ಅಭಿಷೇಕ್ ಎಂಬಿಬ್ಬರನ್ನು ಸತ್ತೇಗಾಲ ಚೆಕ್​​​ಪೋಸ್ಟ್​​​ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮಂಗಳವಾರ (ಮೇ​12) ಮಧ್ಯರಾತ್ರಿ ಮಳವಳ್ಳಿ ತಾಲೂಕಿನ ಕಡೆಯಿಂದ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಪೊಲೀಸರು ಕಾರನ್ನು ಪರಿಶೀಲಿಸಿದಾಗ 22 ಜಿಲೆಟಿನ್ ಸ್ಟಿಕ್ಸ್​ ಹಾಗೂ 22 ನಾನ್ ಎಲೆಕ್ಟ್ರಿಕಲ್ ಡಿಟೋನೇಟರ್​​ಗಳು ಪತ್ತೆಯಾಗಿದೆ. ಇವರ ಬಳಿ ಅಂತರ್ ಜಿಲ್ಲೆಗೆ ಪ್ರವೇಶಿಸುವ ಪಾಸ್ ಕೂಡ ಇರಲಿಲ್ಲ. ಬೂದು ಗಟ್ಟೆಯಲ್ಲಿರುವ ತಮ್ಮ ಜಮೀನಿನಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಈ ಸಾಮಗ್ರಿ ಕೊಂಡೊಯ್ಯುತ್ತಿರುವುದಾಗಿ ಪೊಲೀಸರ ವಿಚಾರಣೆಯ ವೇಳೆ ತಿಳಿದು ಬಂದಿದೆ.

ಈ ಸಂಬಂಧ ಕಾರು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News