ಕ್ವಾರೆಂಟೈನ್ ಮುದ್ರೆ ನೋಡಿ ಹತ್ತಿರ ಹೋಗಲು ಹಿಂಜರಿದ ಸ್ಥಳೀಯರು: ಎರಡು ಗಂಟೆ ರಸ್ತೆಯಲ್ಲೇ ಇದ್ದ ಮೃತದೇಹ

Update: 2020-05-13 14:43 GMT

ಕುಮಟಾ: ಮಹಾರಾಷ್ಟ್ರದಿಂದ ಖಾಸಗಿ ವಾಹನದಲ್ಲಿ ಉಡುಪಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಕುಮಟಾ ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಹೊರ ರಾಜ್ಯದಿಂದ ಬಂದ ಕಾರಣ ಕೈಗೆ ಕ್ವಾರೆಂಟೈನ್ ಮುದ್ರೆ ಹಾಕಲಾಗಿತ್ತು, ಪರಿಣಾಮ ಸ್ಥಳೀಯರು ಹತ್ತಿರ ಹೋಗಲು ಹಿಂಜರಿದರು ಎನ್ನಲಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ಮೃತದೇಹವು ರಸ್ತೆಯಲ್ಲೇ ಇತ್ತು ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿ ಕರುಣಾಕರ ಶೆಟ್ಟಿ ಎಂದು ತಿಳಿದು ಬಂದಿದ್ದು, ಕುಟುಂಬದವರು ಮನವಿ ಮಾಡಿದರೂ ಸ್ಥಳೀಯರು ಅವರ ಹತ್ತಿರ ಹೋಗಲು ಹಿಂಜರಿದರು ಎನ್ನಲಾಗಿದೆ. ನಂತರ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಮೃತದೇಹವನ್ನು ಅಂಬ್ಯುಲೆನ್ ಮೂಲಕ ಕುಮಟಾ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News