ದಾವಣಗೆರೆ: ಬಟ್ಟೆ ಖರೀದಿಸಲು ಅಂಗಡಿಗೆ ಬಂದಿದ್ದ ಮಹಿಳೆಯರಿಗೆ ಮುತ್ತಿಗೆ ಹಾಕಿದ ಆರೋಪ; ಇಬ್ಬರ ಬಂಧನ

Update: 2020-05-18 15:07 GMT

ದಾವಣಗೆರೆ: ಬಟ್ಟೆ ಖರೀದಿಸಲು ಅಂಗಡಿಗೆ ಬಂದಿದ್ದ ಮಹಿಳೆಯೊಬ್ಬರನ್ನು ಸುತ್ತುವರಿದು ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸೈಯದ್ ಮುಹಮ್ಮದ್ (24), ಫಯಾಝ್ ಅಹ್ಮದ್ (32) ಎಂಬ ಇಬ್ಬರು ಯುವಕರನ್ನು ಕೆಟಿಜೆ ನಗರ ಪಿಎಸ್ ಐ ವೀರೇಶ್ ನೇತೃತ್ವದ ತಂಡ ಬಂಧಿಸಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಕೆಲವು ಯುವಕರು ದಾವಣಗೆರೆ ನಗರದ ಎವಿಕೆ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರಿಂದ ಈದ್ ಗೆ ಹೊಸ ಬಟ್ಟೆಗಳನ್ನು ಖರೀದಿಸಿ ಹೊರ ಬಂದ ಮಹಿಳೆಯರನ್ನು ನಡುರಸ್ತೆಯಲ್ಲೇ ತಡೆದು, ‘ಹೊಸ ಬಟ್ಟೆ ಖರೀದಿಸಬಾರದೆಂದು ಸಮಾಜದ ಮುಖಂಡರು ಹೇಳಿಲ್ವಾ. ಯಾಕೆ ಬಟ್ಟೆ ಖರೀದಿಗೆ ಬಂದಿದ್ದೀರಿ’ ಎಂದು ಯುವಕರ ಗುಂಪು ಗದರಿದ್ದಾರೆ ಮತ್ತು ಬಟ್ಟೆಗಳನ್ನು ಹಿಂದಿರುಗಿಸುವಂತೆ ಖರೀದಿಸಿದವರಿಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News