ಸೋಮವಾರಪೇಟೆ: ಕಾಫಿ ತೋಟದಲ್ಲಿ ನಿಲ್ಲಿಸಿದ್ದ ಲಾರಿಗೆ ಕಿಡಿಗೇಡಿಗಳಿಂದ ಬೆಂಕಿ

Update: 2020-05-20 16:06 GMT

ಸೋಮವಾರಪೇಟೆ, ಮೇ.20: ಟಿಂಬರ್ ತುಂಬಿಸಲು ಕಾಫಿ ತೋಟದಲ್ಲಿ ನಿಲ್ಲಿಸಿದ್ದ ಲಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ರಾತ್ರಿ ಸಮೀಪದ ಹುಲ್ಲೂರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಶನಿವಾರಸಂತೆ ಝಾಕಿರ್ ಪಾಷ ಎಂಬವರ ಪತ್ನಿ ನಾಜಿಯಾ ತಬಸ್ಸುಂ ಅವರಿಗೆ ಸೇರಿದ ಗೂಡ್ಸ್ ಲಾರಿಯನ್ನು ಅನಿಲ್ ಅರುಣ್ ಅವರ ಕಾಫಿತೋಟದಲ್ಲಿ ನಿಲ್ಲಿಸಿದ್ದು, ಮಂಗಳವಾರ ರಾತ್ರಿ ಲಾರಿ ಬೆಂಕಿ ಹಚ್ಚಲಾಗಿದೆ, ಇದರಿಂದ ಮುಂಭಾಗ ಸುಟ್ಟು ಕರಕಲಾಗಿದೆ.

ಶನಿವಾರಸಂತೆಯ ಹರೀಶ್, ಧನುಂಜಯ, ಸಕಲೇಶಪುರದ ರಘು, ಐಗೂರಿನ ಭರತ್ ಹಾಗು ಇತರರು ಲಾರಿಗೆ ಬೆಂಕಿ ಹಚ್ಚಿರಬಹುದು ಎಂದು ಝಾಕಿರ್ ಪಾಷ ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ಠಾಣಾಧಿಕಾರಿ ಶಿವಶಂಕರ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ ಪನ್ನೇಕರ್, ಡಿವೈಎಸ್‍ಪಿ ಶೈಲೇಂದ್ರ, ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News