ಕಲಬುರಗಿ: ಲಾಕ್ ಡೌನ್ ನಿಂದ ಕಂಗಾಲಾದ ಹಣ್ಣಿನ ವ್ಯಾಪಾರಿ ಆತ್ಮಹತ್ಯೆ
Update: 2020-05-21 09:44 GMT
ಕಲಬುರಗಿ, ಮೇ 21: ಕೊರೋನ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ನಗರದ ಓರ್ವ ಹಣ್ಣಿನ ವ್ಯಾಪಾರಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡರುವ ಘಟನೆ ನಡೆದಿದೆ.
ನಗರದ ಮೊಮಿನಪುರ ಚಟ್ಟೆ ವಾಡಿ ಬಡಾವಣೆಯ ನಿವಾಸಿ ಅಬ್ದುಲ್ ಖದೀರ್ ಬಾಗಬಾನ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮೂರು ತಿಂಗಳ ಹಿಂದೆ ಹಣ್ಣು ವ್ಯಾಪಾರಕ್ಕಾಗಿ 4ರಿಂದ 5 ಲಕ್ಷ ರೂ. ಸಾಲ ಸಾಲ ಪಡೆದು, ರಮಝಾನ್ ತಿಂಗಳಲ್ಲಿ ಹಣ್ಣು ವ್ಯಾಪಾರ ಮಾಡಿ ಅದನ್ನು ಮರುಪಾವತಿಸುವ ಗುರಿ ಹೊಂದಿದ್ದರು. ಆದರೆ ಲಾಕ್ ಡೌನ್ ಯಿಂದಾಗಿ ವ್ಯಾಪಾರ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಾಲ ತೀರಿಸುವ ಬಗ್ಗೆ ಚಿಂತಿಸಿ ಮನನೊಂದು ನಿನ್ನೆ ತಡ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಈ ಕುರಿತು ಚೌಕ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.