ನವ ದಂಪತಿಗೆ ಕ್ವಾರಂಟೈನ್: ಆತ್ಮಹತ್ಯೆಗೆ ಶರಣಾದ ಪತಿ

Update: 2020-05-26 14:51 GMT

ಬೀದರ್, ಮೇ 26: ಮುಂಬೈನಿಂದ ವಾಪಸ್ಸಾದ ಯುವಕನೊಬ್ಬ ಕ್ವಾರಂಟೈನ್ ಕೇಂದ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ ಜಿಲ್ಲೆ ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸಚಿನ್ ಜಾಧವ್(22) ಎಂಬಾತ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾರಾಯಣಪೂರ ಗ್ರಾಮದ ನಿವಾಸಿಯಾದ ಈತ ಒಂದು ವಾರದ ಹಿಂದೆಯಷ್ಟೇ ತನ್ನ ಹೆಂಡತಿಯೊಂದಿಗೆ ಮುಂಬೈಯಿಂದ ವಾಪಸ್ಸಾಗಿದ್ದ. ಇಬ್ಬರು ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರು. 

ಆದರೆ, ಮಂಗಳವಾರ ಬೆಳಗ್ಗೆ ಪತ್ನಿ ನೋಡಿದಾಗ ಪತಿ ಸಚಿನ್ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ನವ ದಂಪತಿ ವಾರದ ಹಿಂದಷ್ಟೇ ಅಂತರಜಾತಿ ವಿವಾಹ ಮಾಡಿಕೊಂಡಿದ್ದು, ಯುವಕನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಔರಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News