ಅತೃಪ್ತ ಶಾಸಕರ ಸಭೆ ನಡೆದಿಲ್ಲ: ಗೃಹ ಸಚಿವ ಬೊಮ್ಮಾಯಿ
Update: 2020-05-29 15:24 GMT
ಹಾವೇರಿ, ಮೇ 29: ಮಾಜಿ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಬಿಜೆಪಿಯ ಅತೃಪ್ತ ಶಾಸಕರು ಸಭೆ ನಡೆಸಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಆಗಾಗ ಊಟಕ್ಕೆ ಸೇರುವುದು ಮೊದಲಿನಿಂದಲೂ ಇರುವ ಪದ್ಧತಿ. ಇದೂ ಕೂಡ ಅದೇ ರೀತಿ ಔತಣ ಕೂಟವೇ ಹೊರತು ಬೇರೇನೂ ಇಲ್ಲ. ಎಲ್ಲ ಶಾಸಕರು ಬಿಎಸ್ವೈ ನೇತೃತ್ವದಲ್ಲಿ ಒಗ್ಗಟ್ಟಾಗಿದ್ದಾರೆ ಎಂದರು.
ಬಿಜೆಪಿ ಶಿಸ್ತಿನ ಪಕ್ಷ. ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಎಂಬ ಅದಮ್ಯವಾದ ವಿಶ್ವಾಸವಿದೆ. ಕೊರೋನ ಹಿನ್ನೆಲೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ನುಡಿದರು.