ಯಡಿಯೂರಪ್ಪ ಬಗ್ಗೆ ಅಸಮಾಧಾನವಿಲ್ಲ: ಶಾಸಕ ರಾಜುಗೌಡ ಸ್ಪಷ್ಟನೆ

Update: 2020-05-29 17:57 GMT

ಬೆಂಗಳೂರು, ಮೇ 29: ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ನಮಗ್ಯಾರಿಗೂ ಅಸಮಾಧಾನವಿಲ್ಲ. ಶಾಸಕ ಉಮೇಶ್‍ ಕತ್ತಿ ಅವರ ಮನೆಯಲ್ಲಿ ಊಟಕ್ಕೆ ಹೋಗಿದ್ದೆ ಅಷ್ಟೇ ಎಂದು ಶಾಸಕ ನರಸಿಂಹನಾಯಕ್(ರಾಜುಗೌಡ) ಸ್ಪಷ್ಪಪಡಿಸಿದ್ದಾರೆ.

ಶಾಸಕ ಉಮೇಶ್‍ ಕತ್ತಿ ಅವರು ನಿನ್ನೆ ಊಟಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಅದರಂತೆ ಅವರ ಮನೆಗೆ ಊಟಕ್ಕೆ ಹೋಗಿದ್ದೇನೆ. ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಯಡಿಯೂರಪ್ಪನವರ ಬಗ್ಗೆ ಯಾರಿಗೂ ಅಸಮಾಧಾನವೂ ಇಲ್ಲ ಎಂದರು.

ಇಂತಹ ಸಮಯದಲ್ಲಿ ಅಸಮಾಧಾನದ ಚರ್ಚೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ರಾಜುಗೌಡ, ಶಾಸಕರು ಸೇರಿದಾಗ ಕೆಲ ಮಾತುಗಳು ಬರುತ್ತವೆ ಅದನ್ನೆಲ್ಲಾ ಹೇಳಬೇಕಾಗಿಲ್ಲ ಎಂದರು. ನಿನ್ನೆಯ ಸಭೆಯನ್ನು ಕೆಲವರು ತಮ್ಮ ವೈಯಕ್ತಿಕಕ್ಕಾಗಿ ಬಳಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಿನ್ನೆಯ ಸಭೆ ರಾಜಕೀಯ ಸಭೆಯಲ್ಲ. ಊಟಕ್ಕೆ ಎಲ್ಲರೂ ಒಟ್ಟಿಗೆ ಸೇರಿದ್ದು ಅಷ್ಟೇ ಎಂದು ಪುನರುಚ್ಛರಿಸಿದರು.

ಸಿದ್ದು ಸವದಿ ಹೇಳಿಕೆ: ಈ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಸಿದ್ದು ಸವದಿ ಮಾತನಾಡಿ, ಸಭೆಯಲ್ಲಿ ನಡೆದಿದ್ದನ್ನು ಹೇಳಲು ಸಾಧ್ಯವೇ. ಕೆಲ ಗೌಪ್ಯ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಸಭೆಯ ವಿವರಗಳನ್ನು ನೀಡಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News