ರಾಜ್ಯದ ಜಿಲ್ಲಾ ನ್ಯಾಯಾಲಯ ಸೇರಿ ಎಲ್ಲ ನ್ಯಾಯಾಲಯಗಳು ಜು.6ರವರೆಗೆ ಬಂದ್

Update: 2020-06-02 16:34 GMT

ಬೆಂಗಳೂರು, ಜೂ.2: ರಾಜ್ಯದ ಜಿಲ್ಲಾ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ ಸೇರಿ ಎಲ್ಲ ನ್ಯಾಯಾಲಯಗಳನ್ನು ಮುಂದಿನ ಜುಲೈ 6ರವರೆಗೆ ಸ್ಥಗಿತಗೊಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದಾರೆ. 

ಹೈಕೋರ್ಟ್ ರಿಜಿಸ್ಟ್ರಾರ್ ರಾಜೇಂದ್ರ ಬದಾಮಿಕರ್ ಆದೇಶ ಹೊರಡಿಸಿದ್ದು, ಹೈಕೋರ್ಟ್‍ನಲ್ಲಿ ತುರ್ತು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ವಿಡಿಯೋ ಕಾನ್ಫರೆನ್ಸ್ ಕೇಸ್‍ಗಳ ವಿಚಾರಣೆ ಮಾತ್ರ ನಡೆಯಲಿದೆ ಎಂದು ತಿಳಿಸಲಾಗಿದೆ.

ಕೊರೋನ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಕೋರ್ಟ್ ಕಲಾಪಗಳನ್ನು ರದ್ದು ಮಾಡಲಾಗಿತ್ತು. ಜೂನ್ 1ರಿಂದ ಕಲಾಪಗಳನ್ನು ಪುನಾರಂಭ ಮಾಡುವಂತೆ ಹೈಕೋರ್ಟ್ ಕೊರೋನ ಗೈಡ್‍ಲೈನ್ ಬಿಡುಗಡೆ ಮಾಡಿತ್ತು. ಆದರೆ, ಜಿಲ್ಲೆಗಳಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜೂ.3ರಿಂದ ವಿಚಾರಣೆ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News