ಬೆಳಗಾವಿ: ಡಾ.ಅಂಬೇಡ್ಕರ್ ಗೆ ಊಟೋಪಚಾರ ಮಾಡಿದ್ದ ಪ್ರೀತಿಯ ಅಜ್ಜಿ ಇನ್ನಿಲ್ಲ

Update: 2020-06-03 12:38 GMT

ಬೆಳಗಾವಿ, ಜೂ.3: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರೀತಿಯ ಅಜ್ಜಿ ಮುನ್ನಿ(ಜಗಣಭೀ ಪಟೇಲ್-108) ಅವರು ವಯೋಸಹಜ ಅನಾರೋಗ್ಯದಿಂದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ.

1927ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಚಿಕ್ಕೋಡಿಗೆ ಆಗಮಿಸಿದ್ದರು. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಔರವಾಡ ಗ್ರಾಮದ ದೇವಸ್ಥಾನದ ಜಮೀನು ವಿವಾದ ಕೈಗೆತ್ತಿಕೊಂಡಿದ್ದ ಅಂಬೇಡ್ಕರ್, ಚಿಕ್ಕೋಡಿಯ ಕರೋಶಿ ಗ್ರಾಮದಲ್ಲಿ 9 ದಿನ ತಂಗಿದ್ದರು. ಈ ವೇಳೆ ಅವರಿಗಾಗಿ ಜಗಣಭೀ ಪ್ರತಿದಿನ ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ಡಾ.ಅಂಬೇಡ್ಕರ್ ಅಜ್ಜಿಯನ್ನು ಪ್ರೀತಿಯಿಂದ ಮುನ್ನಿ ಎಂದು ಕರೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News