ಬುಲೆಟ್ ನಾಪತ್ತೆ ಪ್ರಕರಣ: ಇಬ್ಬರು ಪೊಲೀಸ್ ಹೆಡ್ ಕಾನ್ಸ್ ಟೇಬಲ್‍ಗಳ ಅಮಾನತು

Update: 2020-06-03 15:29 GMT

ಮೈಸೂರು,ಜೂ.3: ಜಿಲ್ಲೆಯ ತಿ.ನರಸೀಪುರದ ಪೊಲೀಸ್ ಠಾಣೆಯಲ್ಲಿ 303 ಬಂದೂಕಿನ 50 ಬುಲೆಟ್‍ಗಳು ಕಾಣೆಯಾಗಿರುವ ಪ್ರಕರಣ ಸಂಬಂಧ ಇಬ್ಬರು ಹೆಡ್‍ ಕಾನ್ಸ್ ಟೇಬಲ್‍ಗಳನ್ನು ಅಮಾನತು ಮಾಡಲಾಗಿದೆ.

ಪೊಲೀಸ್ ಹೆಡ್ ಕಾನ್ಸ್ ಟೇಬಲ್‍ಗಳಾದ ಕೃಷ್ಣೇಗೌಡ ಹಾಗೂ ನಿಂಗರಾಜು ಅಮಾನತುಗೊಂಡವರು.

ಎಲ್ಲಾ ಠಾಣೆಯ ಶಸ್ತ್ರಾಸ್ತ್ರಗಳ ಜವಾಬ್ದಾರಿ ಠಾಣೆಯ ರೈಟರ್ ಅವರದಾಗಿರುತ್ತದೆ. ಹಾಗಾಗಿ ಶಸ್ತ್ರಾಸ್ತ್ರ ದಾಸ್ತಾನಿನ ಬೀಗದ ಕೈ ಅವರ ಬಳಿಯೇ ಇರುತ್ತದೆ. ಠಾಣೆಯ ಹಿಂದಿನ ರೈಟರ್ ಆಗಿದ್ದ ಕೃಷ್ಣೇಗೌಡ ಮತ್ತು ಪ್ರಸ್ತುತ ರೈಟರ್ ಆಗಿ ಕರ್ತವ್ಯ ನಿರ್ವಹಿಸುತಿದ್ದ ನಿಂಗರಾಜು ಅವರನ್ನು ಅಮಾನತು ಮಾಡಿದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News