ಮತ್ತೆ ಇಬ್ಬರು ಕಾನ್‍ಸ್ಟೇಬಲ್‍ಗಳಿಗೆ ಕೊರೋನ ಶಂಕೆ: ಠಾಣೆ ಸೀಲ್‍ಡೌನ್

Update: 2020-06-04 17:44 GMT

ರಾಯಚೂರು, ಜೂ.4: ರಾಯಚೂರು ಜಿಲ್ಲೆಯಲ್ಲಿನ ಮತ್ತೆ ಇಬ್ಬರು ಕಾನ್‍ಸ್ಟೇಬಲ್‍ಗಳಿಗೆ ಕೊರೋನ ಸೋಂಕು ದೃಢವಾಗಿರುವ ಶಂಕೆಯಿದ್ದು, ನಗರದ ಪಶ್ಚಿಮ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡುವ ಸಾಧ್ಯತೆ ಇದೆ.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕ್ವಾರಂಟೈನ್ ಕೇಂದ್ರಕ್ಕೆ ಕಾನ್‍ಸ್ಟೇಬಲ್‍ಗಳನ್ನು ನಿಯೋಜಿಸಲಾಗಿತ್ತು. ಮಹಾರಾಷ್ಟ್ರದಿಂದ ಬಂದಿದ್ದ ಜನರು ಈ ಕ್ವಾರಂಟೈನ್ ಕೇಂದ್ರದಲ್ಲಿದ್ದರು.

ಅಧಿಕೃತ ಮಾಹಿತಿ ಘೋಷಣೆ ಬಾಕಿ ಇದೆ. ಈ ಮೊದಲು ದೇವದುರ್ಗ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಒಬ್ಬರಿಗೆ ಕೊರೋನ ದೃಢವಾಗಿತ್ತು. ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News