ಬಳ್ಳಾರಿ ಜಿಲ್ಲೆಯ ನ್ಯಾಯಾಲಯಗಳ ಪ್ರಾರಂಭಕ್ಕೆ ಮಾರ್ಗಸೂಚಿ

Update: 2020-06-08 16:58 GMT

ಬೆಂಗಳೂರು, ಜೂ.8: ಹೈಕೋರ್ಟಿನ ನಿರ್ದೇಶನದಂತೆ ಬಳ್ಳಾರಿ ಜಿಲ್ಲೆಯ ನ್ಯಾಯಾಲಯಗಳು ತಮ್ಮ ದೈನಂದಿನ ಕಲಾಪಗಳನ್ನು ಆರಂಭಿಸಲಿದ್ದು ಮೊದಲೆರಡು ವಾರಗಳಲ್ಲಿ ಕೇವಲ ವಾದ-ವಿವಾದ ಮಂಡನೆಗೆ ಮಾತ್ರ ಅವಕಾಶವಿರುತ್ತದೆ.

ಪ್ರತಿ ನ್ಯಾಯಾಲಯದಲ್ಲಿ ಕೇವಲ 20 ಮಂದಿ ಮಾತ್ರ ಹಾಜರಿರಬಹುದಾಗಿದೆ (ನ್ಯಾಯಾಧೀಶರು, ಸಿಬ್ಬಂದಿ ಹಾಗೂ ವಕೀಲರು ಸೇರಿದಂತೆ 20 ಜನರು) ಹಾಗೂ ದಿನ ಒಂದಕ್ಕೆ ಕೇವಲ 20 ಪ್ರಕರಣಗಳನ್ನು ನಡೆಸಬಹುದಾಗಿದೆ(ಬೆಳಗ್ಗೆ 10 ಪ್ರಕರಣಗಳು ಮತ್ತು ಅಪರಾಹ್ನ 10 ಪ್ರಕರಣಗಳು). ಪಕ್ಷಗಾರರು ಹಾಗೂ ವಕೀಲರ ಗುಮಾಸ್ತರರಿಗೆ ನ್ಯಾಯಾಲಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ನ್ಯಾಯಾಲಯಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವಕೀಲರು ಹಾಗೂ ಸಿಬ್ಬಂದಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಕರ್ನಾಟಕ ಉಚ್ಛ ನ್ಯಾಯಾಲಯವು ಕಾಲಕಾಲಕ್ಕೆ ನೀಡಿರುವ ಸಲಹೆಗಳು/ಕರ್ನಾಟಕ ಪ್ರಧಾನ ಆರೋಗ್ಯ ಕಾರ್ಯದರ್ಶಿಗಳು ಹೊರಡಿಸಿರುವ ಎಸ್.ಓ.ಪಿ ಹಾಗೂ ಕೇಂದ್ರ ಸರಕಾರ ನೀಡಿರುವ ಮಾರ್ಗದರ್ಶಿಯನ್ನು ಅನುಸರಿಸಿ ನ್ಯಾಯಾಲಯಗಳ ಕಲಾಪದಲ್ಲಿ ಭಾಗವಹಿಸುವಂತೆ ಬಳ್ಳಾರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News