ಹಾಸನ: ಸಕಲ ಸರಕಾರಿ ಗೌರವಗಳೊಂದಿಗೆ ಮೃತ ಯೋಧನ ಅಂತ್ಯಕ್ರಿಯೆ

Update: 2020-06-14 17:46 GMT

ಹಾಸನ, ಜೂ.14: ಕಳೆದ 19 ವರ್ಷಗಳಿಂದ ಛತ್ತಿಸ್ ಗಡದ ಸುಕ್ಮಾದಲ್ಲಿ ಯೋಧನಾಗಿ ಕರ್ತವ್ಯದಲ್ಲಿ ನಿರತರಾಗಿದ್ದ ಹೇಮಂತ್ ಕುಮಾರ್ ಹೃದಯಘಾತದಿಂದ ಸಾವನಪ್ಪಿದ್ದು, ಅವರ ಅಂತ್ಯಕ್ರಿಯೆಯು ಹಾಸನ ತಾಲೂಕಿನ ಈಚಲಹಳ್ಳಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ರವಿವಾರ ಮಧ್ಯಾಹ್ನ ನೆರವೇರಿತು. 

ಮೃತ ಯೋಧ ಹೇಮಂತ್ ಕುಮಾರ್ ರವರು ಕಳೆದ 19 ವರ್ಷಗಳಿಂದ 150ನೇ ಬೆಟಾಲಿಯನ್ ನಲ್ಲಿ ಸಿಆರ್ ಪಿಎಫ್ ನಲ್ಲಿ ಸುಧೀರ್ಘ ಸೇವೆ ಸಲ್ಲಿಸುತ್ತಿದ್ದು, ಇನ್ನು ಕೇವಲ 10 ತಿಂಗಳು ಸೇವೆ ಸಲ್ಲಿಸಿದ್ದರೆ ನಿವೃತ್ತಿ ಪಡೆಯಬಹುದಿತ್ತು. ಮೃತ ಯೋಧನಿಗೆ ಪತ್ನಿ ಹಾಗೂ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿತ್ತು.

ಯೋಧನ ಮೃತದೇಹವನ್ನು ಸ್ವಗ್ರಾಮಕ್ಕೆ ತಂದು ಸಕಲ ಸರಕಾರಿ ಗೌರವದೊಡನೆ ಅಂತ್ಯ ಸಂಸ್ಕಾರ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News