ಹಾಸನ: ರಸ್ತೆಯಲ್ಲಿ ಮಲಗಿ, ಒದ್ದಾಡಿ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದ ಅಪರಿಚಿತ ವ್ಯಕ್ತಿ

Update: 2020-06-16 18:12 GMT

ಹಾಸನ, ಜೂ.16: ಹಾಸನ ನಗರದ ಹೊಸ ಬಸ್ ನಿಲ್ದಾಣ ಹಿಂಭಾಗ ರೈಲ್ವೆ ಹಳಿ ಬಳಿ ರಸ್ತೆ ಮಧ್ಯೆ ಮಲಗಿದ ಅಪರಿಚಿತ ವ್ಯಕ್ತಿ ಓರ್ವ ಸ್ಥಳಿಯರಲ್ಲಿ ಆತಂಕ ಸೃಷ್ಟಿಸಿ ಕೊನೆಗೆ ವೈದ್ಯರು ಕೊಂಡೂಯ್ದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ಹಾಗೆ, ಕೈಯಲ್ಲಿ ಡ್ರಿಪ್ ಸಿರೆಂಜ್ ಇರುವ ವ್ಯಕ್ತಿಯೋರ್ವ ನಡು ರಸ್ತೆ ಮಧ್ಯೆ ಮಲಗಿ ಒದ್ದಾಡುತ್ತಿದ್ದರಿಂದ ಕೊರೋನ ರೋಗಿ ಎಂದು ಜನರಲ್ಲಿ ಕೆಲ ಸಮಯ ಭಯದ ವಾತವರಣ ನಿರ್ಮಾಣವಾಯಿತು. ಈತ ರಾತ್ರಿಯೇ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರಬಹುದು ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬಂತು. ಆದರೆ ಹತ್ತಿರ ಹೋಗಲು ಹೆದರಿದ ಜನರು ಗೊತ್ತಿಲ್ಲದಂತೆ ಸುಮ್ಮನಿದ್ದರು.

ವಿಷಯ ತಿಳಿದ ತುರ್ತು ವಾಹನದ ಸಿಬ್ಬಂದಿಗಳು ಸ್ಥಳಕ್ಕೆ ಬಂದರೂ ಕೂಡ ಹತ್ತಿರ ಹೋಗಲು ಹಿಂದೇಟು ಹಾಕಿದ ಪ್ರಸಂಗ ನಡೆಯಿತು. ನಂತರ ಪಿಪಿಇ ಕಿಟ್ ಧರಿಸಿದ ವೈದ್ಯರ ಸಹಕಾರದಲ್ಲಿ ವಾಹನಕ್ಕೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕೊಂಡೂಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News