ಬಿಎಸ್‌ವೈಗೆ ಧಮ್ ಇಲ್ಲ, ಮೋದಿ ಹೇಳಿದ ರೀತಿ ಡ್ಯಾನ್ಸ್ ಮಾಡುತ್ತಾರೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2020-06-19 15:55 GMT

ಮೈಸೂರು,ಜೂ.19: ವಿಧಾನಪರಿಷತ್ ಕೈ ತಪ್ಪಿದ್ದಕ್ಕೆ ಮಾಜಿ ಸಚಿವ ಎಚ್.ವಿಶ್ವನಾಥ್ ನನ್ನ ಮೇಲೆ ಆರೋಪ ಮಾಡಿದ್ದಾರೆ. ಆತ ದಡ್ಡನೋ ಪೆದ್ದನೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಎಚ್.ವಿಶ್ವನಾಥ್ ಆರೋಪ ಮಾಡಿದ್ದಾರೆ. ನಾನು ಕಾಂಗ್ರೆಸ್ ಅವರು ಬಿಜೆಪಿ ಹೇಗೆ ನಾನು ಅವರಿಗೆ ಟಿಕೆಟ್ ತಪ್ಪಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾಜಿ ಸಚಿವ ವಿಶ್ವನಾಥ್ ಗೆ ನನ್ನ ಮೇಲೆ ನಂಜು. ಪ್ರತಿ ಬಾರಿ ನನ್ನ ಹೆಸರನ್ನೆ ಹೇಳುತ್ತಾರೆ. ಅವರಿಗೆ ಅಧಿಕಾರ ಸಿಗದಿದ್ದಾಗ ನನ್ನ ಹೆಸರು ನೆನಪಾಗುತ್ತೆ. ವಿಶ್ವನಾಥ್ ದಡ್ಡನೋ..ಪೆದ್ದನೋ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ನಲ್ಲಿದ್ದೀನಿ. ಅವನು ಬಿಜೆಪಿಯಲ್ಲಿದ್ದಾನೆ. ಅವನ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಹೇಳಿದರು.

ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೂ ಕಿಡಿಕಾರಿದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪಗೆ ಧಮ್ ಇಲ್ಲ. ಕೇಂದ್ರದಿಂದ ಬರಬೇಕಾದ ಹಣ ತರಿಸಲು ಸಾಧ್ಯವಾಗುತ್ತಿಲ್ಲ. ಮೋದಿ ಹೇಳಿದ ರೀತಿ ಡ್ಯಾನ್ಸ್ ಮಾಡುತ್ತಾರೆ. ಯಡಿಯೂರಪ್ಪಗೆ ಧಮ್ ಇದ್ದರೆ ನಮಗೆ ಬರಬೇಕಾದ ಹಣ ಎಲ್ಲಾ ಬರುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News